ADVERTISEMENT

ತಾಯಿ, ಮಕ್ಕಳು ಆತ್ಮಹತ್ಯೆ ಪ್ರಕರಣ: ಬಂಟ್ವಾಳದಲ್ಲಿ ಪುತ್ರನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 13:16 IST
Last Updated 1 ಅಕ್ಟೋಬರ್ 2019, 13:16 IST
ಅಗ್ನಿಶಾಮಕದಳ ತಂಡ, ಎನ್‌ಡಿಆರ್‌ಎಫ್‌ ತಂಡ, ಸ್ಥಳೀಯ ಈಜುಗಾರರ ನೆರವಿನೊಂದಿಗೆ ಮಂದಣ್ಣ ಅವರ ಮೃತದೇಹವನ್ನು ನದಿಯಿಂದ  ಮೇಲೆತ್ತಲಾಯಿತು
ಅಗ್ನಿಶಾಮಕದಳ ತಂಡ, ಎನ್‌ಡಿಆರ್‌ಎಫ್‌ ತಂಡ, ಸ್ಥಳೀಯ ಈಜುಗಾರರ ನೆರವಿನೊಂದಿಗೆ ಮಂದಣ್ಣ ಅವರ ಮೃತದೇಹವನ್ನು ನದಿಯಿಂದ  ಮೇಲೆತ್ತಲಾಯಿತು   

ಬಂಟ್ವಾಳ:ಪಾಣೆಮಂಗಳೂರು ನೇತ್ರಾವತಿ ನದಿಗೆ ಸೇತುವೆ ಮೇಲಿನಿಂದ ಸಾಕುನಾಯಿ ಜೊತೆಗೆ ತಾಯಿ ಮತ್ತು ಇಬ್ಬರು ಮಕ್ಕಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪುತ್ರಕೌಶಿಕ್ ಮಂದಣ್ಣ (29) ಅವರ ಶವ ಮಂಗಳವಾರ ಸಿಕ್ಕಿದೆ.

ಮೈಸೂರಿನ ಮನೆಯಲ್ಲಿ ಯಜಮಾನನ ಸಾವಿನಿಂದ ಮನ ನೊಂದು ಶನಿವಾರ ತಡ ರಾತ್ರಿ ಕಾರಿನಲ್ಲಿ ಬಂದು ನೇತ್ರಾವತಿ ನದಿಗೆ ಹಾರಿದ್ದರು. ಈ ಪೈಕಿ ತಾಯಿ ಮತ್ತು ಪುತ್ರಿಯ ಶವ ಶನಿವಾರ ಮತ್ತು ಭಾನುವಾರ ಪತ್ತೆಯಾಗಿತ್ತು. ಇದೀಗ ಮೖತರ ಪುತ್ರ ಕೌಶಿಕ್ ಮಂದಣ್ಣ ಇವರ ಮೃತದೇಹ ಬಿ.ಸಿ.ರೋಡು ಸಮೀಪದ ಪರ್ಲಿಯಾ- ತಾಳಿಪಡ್ಪು ಎಂಬಲ್ಲಿ ತೇಲುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕದಳ ತಂಡ, ಎನ್‌ಡಿಆರ್‌ಎಫ್‌ ತಂಡ, ಸ್ಥಳೀಯ ಈಜುಗಾರರ ನೆರವಿನೊಂದಿಗೆ ಮೃತದೇಹ ಮೇಲೆತ್ತಿ ಮಂಗಳೂರು ವೆನ್ಲಾಕ್‌ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.