ADVERTISEMENT

ಗಾಯತ್ರಿ ನಾವಡಗೆ ಹಲಸಂಗಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:19 IST
Last Updated 6 ಡಿಸೆಂಬರ್ 2021, 16:19 IST
ಗಾಯತ್ರಿ ನಾವುಡ
ಗಾಯತ್ರಿ ನಾವುಡ   

ಮಂಗಳೂರು: ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರ ಪ್ರತಿಷ್ಠಾನವು 2021ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಸಾಹಿತಿಗಳಾದ ಡಾ. ಅರವಿಂದ ಮಾಲಗತ್ತಿ (ಕಾವ್ಯ), ಡಾ. ಬಸವರಾಜ ಕಲ್ಗುಡಿ (ವಿಮರ್ಶೆ, ಸಂಶೋಧನೆ), ಮಂಗಳೂರಿನ ಡಾ. ಗಾಯತ್ರಿ ನಾವಡ (ಜಾನಪದ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 51 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಿ.17ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ. ಸುನಿಲ್‌ಕುಮಾರ್, ಸದಸ್ಯ ಕಾರ್ಯದರ್ಶಿ ಈರಪ್ಪ ಆಶಾಪುರ, ಸಂಚಾಲಕ ಪ್ರೊ. ದೊಡ್ಡಣ ಬಜಂತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT