ADVERTISEMENT

ಬಂಟ್ವಾಳ: ಗಾಳಿ ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 13:03 IST
Last Updated 20 ಏಪ್ರಿಲ್ 2024, 13:03 IST
ಬಂಟ್ವಾಳ ತಾಲ್ಲೂಕಿನ ರಾಯಿ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಶನಿವಾರ ಮುಂಜಾನೆ ಸುರಿದ ಗಾಳಿ ಮಳೆಗೆ ಆವರಣಗೋಡೆ ಕುಸಿದಿದೆ
ಬಂಟ್ವಾಳ ತಾಲ್ಲೂಕಿನ ರಾಯಿ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಶನಿವಾರ ಮುಂಜಾನೆ ಸುರಿದ ಗಾಳಿ ಮಳೆಗೆ ಆವರಣಗೋಡೆ ಕುಸಿದಿದೆ   

ಬಂಟ್ವಾಳ: ತಾಲ್ಲೂಕಿನ ಕೆಲವೆಡೆ ಶನಿವಾರ ಮುಂಜಾನೆ ಮಿಂಚು ಮತ್ತು ಗುಡುಗು ಸಹಿತ ಗಾಳಿ ಮಳೆಯಾಗಿದೆ.

ಇಲ್ಲಿನ ಸೋರ್ಣಾಡು, ರಾಯಿ, ಸಿದ್ಧಕಟ್ಟೆ, ವಾಮದಪದವು, ಕಾಡಬೆಟ್ಟು, ವಗ್ಗದಲ್ಲಿ ಶನಿವಾರ ನಸುಕಿನ 3 ಗಂಟೆಯಿಂದ 5 ಗಂಟೆವರೆಗೆ ಗಾಳಿ ಮಳೆಯಾಗಿದೆ. ಚರಂಡಿ ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ಮಣ್ಣು ತುಂಬಿಕೊಂಡು ಕೆಸರುಮಯವಾಗಿ ಪರಿವರ್ತನೆಗೊಂಡಿದೆ. ಹಲವೆಡೆ ಅಡಿಕೆ, ಬಾಳೆ ಗಿಡ ಮತ್ತು ರಬ್ಬರ್ ಮರಗಳು ಮುರಿದು ಬಿದ್ದಿವೆ. ರಾಯಿ ಸಮೀಪದ ಮುದ್ದಾಜೆ ಎಂಬಲ್ಲಿ ಅಡಿಕೆ ಮರ ಮುರಿದು ಬಿದ್ದು ನಷ್ಟ ಉಂಟಾಗಿದೆ ಎಂದು ಕೃಷಿಕರೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT