ಬಂಟ್ವಾಳ: ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ಆರಂಭಗೊಂಡ 10ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ಭಾನುವಾರ ರಾತ್ರಿ ಸಮಾರೋಪಗೊಂಡಿತು.
ಈ ವರ್ಷದ ಪ್ರಥಮ ಕಂಬಳದಲ್ಲಿ ಒಟ್ಟು 214 ಜೊತೆ ಕೋಣಗಳು ಭಾಗವಹಿಸಿ ಗಮನ ಸೆಳೆದಿದೆ. ಕನೆಹಲಗೆಯಲ್ಲಿ 2 ಜೊತೆ, ಅಡ್ಡಹಲಗೆ 9, ಹಗ್ಗ ಹಿರಿಯ 19, ನೇಗಿಲು ಹಿರಿಯ 31, ಹಗ್ಗ ಕಿರಿಯ 26, ನೇಗಿಲು ಕಿರಿಯ 75, ನೇಗಿಲು ಸಬ್ ಸಬ್ ಜೂನಿಯರ್ ವಿಭಾಗದಲ್ಲಿ 52 ಜೊತೆ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶ:
ಕನೆಹಲಗೆ: ಎರಡು ಜೊತೆ ಸಮಾನ ಬಹುಮಾನ ಹಂಚಿಕೊಂಡಿದೆ. ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ ಮತ್ತು ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಹಲಗೆ ಮುಟ್ಟಿದವರು– ಬೈಂದೂರು ಭಾಸ್ಕರ ದೇವಾಡಿಗ
ಅಡ್ಡ ಹಲಗೆ: ನಾರಾವಿ ಯುವರಾಜ್ ಜೈನ್ (ಪ್ರ), ಹಲಗೆ ಮುಟ್ಟಿದವರು– ಭಟ್ಕಳ ಹರೀಶ್. ಪೆರಿಯಾವು ಗುತ್ತು ಸತೀಶ್ ಗಟ್ಟಿ (ದ್ವಿ), ಹಲಗೆ ಮುಟ್ಟಿದವರು– ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ
ಹಗ್ಗ ಹಿರಿಯ: ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ‘ಎ‘ (ಪ್ರ), ಓಡಿಸಿದವರು– ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. ರಾಯಿ ಸಿತಲ ಅಗರಿ ರೂಪ ರಾಜೇಶ್ ಶೆಟ್ಟಿ ‘ಎ’ (ದ್ವಿ), ಓಡಿಸಿದವರು– ಬೈಂದೂರ್ ಹರೀಶ್
ಹಗ್ಗ ಕಿರಿಯ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ (ಪ್ರ), ಓಡಿಸಿದವರು– ಕೊಳಕೆ ಇರ್ವತ್ತೂರು ಆನಂದ್. ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ. ಶೆಟ್ಟಿ (ದ್ವಿ), ಓಡಿಸಿದವರು– ಮರೋಡಿ ಶ್ರೀಧರ್
ನೇಗಿಲು ಹಿರಿಯ:ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ ‘ಬಿ’ (ಪ್ರ), ಓಡಿಸಿದವರು– ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ. ಕನಡ್ತ್ಯಾರ್ ಕೃಷ್ಣ ಶೆಟ್ಟಿ (ದ್ವಿ), ಓಡಿಸಿದವರು– ಕಾವೂರ್ ತೋಟ ಸುದರ್ಶನ್
ನೇಗಿಲು ಕಿರಿಯ: ಜೈ ತುಳುನಾಡ್ ಕಕ್ಯಪದವು ಪುನ್ಕೆದಡಿ ರಾಮಯ್ಯ ಭಂಡಾರಿ (ಪ್ರ), ಓಡಿಸಿದವರು– ಕಕ್ಯಪದವು ಪೆಂರ್ಗಾಲು ಕೃತಿಕ್. ಪಣೋಲಿಬೈಲು ಭಂಡಾರಮನೆ ಶಿವಾನಂದ ಕುಲಾಲ್ (ದ್ವಿ), ಓಡಿಸಿದವರು– ಪೆರಿಂಜೆ ಪ್ರಮೋದ್
ನೇಗಿಲು ಸಬ್ ಜೂನಿಯರ್: ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ (ಪ್ರ), ಓಡಿಸಿದವರು– ಬೈಂದೂರು ವಿಶ್ವನಾಥ ದೇವಾಡಿಗ. ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್ (ದ್ವಿ) ಓಡಿಸಿದವರು– ಭಟ್ಕಳ ವಿನೋದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.