ADVERTISEMENT

ಮಂಗಳೂರು: ಅಕ್ಕಿ, ದವಸ ಧಾನ್ಯ ಕಿಟ್ ವಿತರಣೆ: ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 4:12 IST
Last Updated 21 ಜೂನ್ 2021, 4:12 IST
ಮಂಗಳೂರು ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ಶನಿವಾರ ಅಕ್ಕಿ, ದಿನಸಿ ಸಾಮಗ್ರಿ ನೀಡಲಾಯಿತು.
ಮಂಗಳೂರು ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ಶನಿವಾರ ಅಕ್ಕಿ, ದಿನಸಿ ಸಾಮಗ್ರಿ ನೀಡಲಾಯಿತು.   

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ 160 ಜನರಿಗೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ಶನಿವಾರ ಮನೆಗೆ ತೆರಳಿ ಅಕ್ಕಿ, ದಿನಸಿ ಸಾಮಗ್ರಿ ನೀಡಲಾಯಿತು.

ಕದ್ರಿ ದೇವಸ್ಥಾನದ ಬಳಿಯಿರುವ ಗೋಕುಲ್ ಹಾಲ್‌ನಲ್ಲಿ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಚಾಲನೆ ನೀಡಿದರು.

ಯವರು ಲೊಕ್ ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಕ್ಕಿ, ದವಸ ಧಾನ್ಯಗಳ ಕಿಟ್ ವಿತರಣೆಯನ್ನು ಪ್ರಸಾದ್ ಕದ್ರಿ ಅವರು ದಾನಿಗಳ ಸಹಕಾರದಿಂದ ಮಾಡುವ ಅಮೂಲ್ಯವಾದ ಸಮಾಜಮುಖಿ ಕೆಲಸ ನಿಜಕ್ಕೂ ಸುತ್ಯರ್ಹ. ಹಸಿದ ಹೊಟ್ಟೆಗೆ ಆಹಾರ ಪೂರೈಸುವ ಕಿಟ್ ವಿತರಣೆ ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಸೂರಜ್ ಕದ್ರಿ, ಪ್ರಸಾದ್ ಕದ್ರಿ, ವಿವೇಕ್ ಆಚಾರ್ಯ, ರಾಜೇಶ್ ಆಚಾರ್ಯ, ಉಮೇಶ್ ಆಚಾರ್ಯ ಕದ್ರಿ, ಗೋಕುಲ್ ಕದ್ರಿ, ಸುಜೀರ್ ವಿನೋದ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.