ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ವೀರಕಂಭ ಗ್ರಾಮದಲ್ಲಿ 100 ಅಡಿ ಎತ್ತರದ ಗುಡ್ಡವು ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ.
ವೀರಕಂಭ ಗ್ರಾಮದ ಸಿಂಗೇರಿತೋಟ ದಿನೇಶ್ ಎಸ್. ಅವರ ಮನೆಯ ಹಿಂಭಾಗದ ಸುಮಾರು 100 ಅಡಿ ಎತ್ತರದ ಗುಡ್ಡವು ಶುಕ್ರವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕುಸಿದು ಭಾರಿ ಹಾನಿ ಸಂಭವಿಸಿದೆ. ಕುಸಿಯುವ ಸದ್ದು ಆಕಸ್ಮಿಕವಾಗಿ ಮನೆಯವರಿಗೆ ತಿಳಿದ ಕಾರಣ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಮನೆಗೆ ಭಾಗಶಃ ಹಾನಿಯಾಗಿದೆ. ಅಡುಗೆ ಕೋಣೆ, ಬಚ್ಚಲು ಮನೆ, ಶೌಚಾಲಯ ಮಣ್ಣಿನೊಳಗೆ ಸೇರಿದೆ. ₹4 ಲಕ್ಷ ನಷ್ಟ ಸಂಭವಿಸಬಹುದೆಂದು ಅಂದಾಜಿಸಲಾಗಿದೆ. ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.