ADVERTISEMENT

ಬಂಟ್ವಾಳ: ಲಯನ್ಸ್ ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷರಾಗಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 7:58 IST
Last Updated 16 ಡಿಸೆಂಬರ್ 2023, 7:58 IST
ಬಂಟ್ವಾಳ ತಾಲ್ಲೂಕಿನ ಮಂಚಿ ಲಯನ್ಸ್ ಸಭಾಂಗಣದಲ್ಲಿ ನಡೆದ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮದ ಸಭೆಯಲ್ಲಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಮಾತನಾಡಿದರು
ಬಂಟ್ವಾಳ ತಾಲ್ಲೂಕಿನ ಮಂಚಿ ಲಯನ್ಸ್ ಸಭಾಂಗಣದಲ್ಲಿ ನಡೆದ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮದ ಸಭೆಯಲ್ಲಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಮಾತನಾಡಿದರು   

ಬಂಟ್ವಾಳ: ಫೆ.11ರಂದು ನಡೆಯಲಿರುವ 10 ಲಯನ್ಸ್ ಕ್ಲಬ್‌ಗಳ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ ಅಧ್ಯಕ್ಷರಾಗಿ ಉದ್ಯಮಿ ದಾಮೋದರ ಬಿ.ಎಂ.ಮಾರ್ನಬೈಲು ಆಯ್ಕೆಯಾಗಿದ್ದಾರೆ.

ಇಲ್ಲಿನ ಮಂಚಿ ಲಯನ್ಸ್ ಸಭಾಂಗಣದಲ್ಲಿ ನಡೆದ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಮಿತಿ ಕಾರ್ಯದರ್ಶಿಯಾಗಿ ಜಯಪ್ರಕಾಶ್ ರೈ ಮೇರಾವು, ಕೋಶಾಧಿಕಾರಿಯಾಗಿ ರಾಮ್ ಪ್ರಸಾದ್ ರೈ, ಗೌರವ ಮಾರ್ಗದರ್ಶಕರಾಗಿ ವಸಂತ ಕುಮಾರ್ ಶೆಟ್ಟಿ, ಕೆ.ದೇವದಾಸ ಭಂಡಾರಿ, ಗೌರವಾಧ್ಯಕ್ಷರಾಗಿ ಗೋಪಾಲ ಆಚಾರ್ ಮಂಚಿ, ಗೌರವ ಸಲಹೆಗಾರರಾಗಿ ವಿಠಲ ಕುಮಾರ್ ಶೆಟ್ಟಿ, ಮನೋರಂಜನ್ ಕೆ. ಆರ್.ಆಯ್ಕೆಯಾದರು.

ADVERTISEMENT

ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ರಮಾ ಜಿ.ಆಚಾರ್ ಸ್ವಾಗತಿಸಿ, ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂತೀಯ ಮಾಜಿ ಸಂಯೋಜಕ ವಿಜಯ ರೈ, ವಲಯಾಧ್ಯಕ್ಷ ಎವುಜಿನ್ ಲೋಬೊ, ಡೊನಾಲ್ಡ್ ಬಂಟ್ವಾಳ್, ವಲಯ ಸಂಯೋಜಕ ಸತೀಶ್ ಭಂಡಾರಿ, ಕ್ಲಬ್ ಕಾರ್ಯದರ್ಶಿ ಶರ್ಮಿಳಾ ವಿ.ಶೆಟ್ಟಿ, ಕೋಶಾಧಿಕಾರಿ ರಾಜಲಕ್ಷ್ಮೀ ಮನೋರಂಜನ್, ಕ್ಲಬ್ ಅಧ್ಯಕ್ಷ ಆದರ್ಶ್‌ ಕೆ.ಎನ್., ಫೆಲಿಕ್ಸ್ ಲೋಬೊ, ಅರುಣ್ ಡಿಸೋಜ, ಜಯರಾಮ ಬಳ್ಳಾಲ್, ಚಂದ್ರಶೇಖರ ಶೆಟ್ಟಿ, ಜಗದೀಶ್ ಕೊಲ, ನೋವೆಲ್ ಲೋಬೊ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.