ADVERTISEMENT

ಲಷ್ಕರ್ ಪರ ಗೋಡೆಬರಹ: ಮೂವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 19:45 IST
Last Updated 28 ನವೆಂಬರ್ 2020, 19:45 IST
ಕೌಂಪೌಂಡ್‌‌‌ ಮೇಲೆ ಕಿಡಿಗೇಡಿಗಳು ಬರೆದಿರುವ ಉಗ್ರ ಸಂಘಟನೆ ಪರ ಗೋಡೆ ಬರಹ
ಕೌಂಪೌಂಡ್‌‌‌ ಮೇಲೆ ಕಿಡಿಗೇಡಿಗಳು ಬರೆದಿರುವ ಉಗ್ರ ಸಂಘಟನೆ ಪರ ಗೋಡೆ ಬರಹ   

ಮಂಗಳೂರು: ನಗರದ ಅಪಾರ್ಟ್‌ ಮೆಂಟ್‌ವೊಂದರ ಕಾಂಪೌಂಡ್‌ ಗೋಡೆ ಮೇಲೆ ‘ಲಷ್ಕರ್’ ಪರ ಸಂದೇಶ ಬರೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಶಂಕಿತ ಮೂವರ ವಿಚಾರಣೆ ನಡೆಸಿದ್ದಾರೆ.

ಈ ಗೋಡೆ ಬರಹವನ್ನು ಸ್ಪ್ರೇ ಪೇಯಿಂಟ್‌ ಮೂಲಕ ಬರೆದು, ತಕ್ಷಣವೇ ಪರಾರಿಯಾಗಿರುವ ಸಾಧ್ಯತೆ ಇದೆ. ಈ ಸಂಬಂಧ ಮೂವರ ವಿಚಾರಣೆ ನಡೆಸಿದ್ದು, ಕೃತ್ಯದ ಹಿಂದಿನ ಸಂಘಟನೆ ಹಾಗೂ ಕುಮ್ಮಕ್ಕು ನೀಡಿದವರ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕದ್ರಿ, ಕೆಪಿಟಿ, ಕದ್ರಿ ಕಂಬಳ, ಕುಂಟಿಕಾನ, ಬಿಜೈ ಸುತ್ತಲ ಪ್ರದೇಶದ ಸಿಸಿಟಿವಿ ಕ್ಯಾಮೆರಾ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ನಾನಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರ ಕೇಂದ್ರ ಉಪವಿಭಾಗ ಎಸಿಪಿ ಎಂ.ಜಗದೀಶ್, ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ಪವಿತ್ರ ತೇಜ, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.