ADVERTISEMENT

ಉಕ್ರೇನ್‌ನಿಂದ ಮಂಗಳೂರಿಗೆ ಮರಳಿದ ಅನುಷಾ ಭಟ್

ರೊಮೇನಿಯಾದಿಂದ ಮುಂಬೈಗೆ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 9:19 IST
Last Updated 3 ಮಾರ್ಚ್ 2022, 9:19 IST
ಉಕ್ರೇನ್‌ನಿಂದ ಮಂಗಳೂರಿಗೆ ಮರಳಿದ ಅನುಷಾ ಭಟ್
ಉಕ್ರೇನ್‌ನಿಂದ ಮಂಗಳೂರಿಗೆ ಮರಳಿದ ಅನುಷಾ ಭಟ್   

ಮಂಗಳೂರು: ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಗರದ ಬಿಜೈ ನಿವಾಸಿ ಅನುಷಾ ಭಟ್, ಗುರುವಾರ ಸುರಕ್ಷಿತವಾಗಿ ನಗರಕ್ಕೆ ಬಂದಿಳಿದಿದ್ದಾರೆ.

ಉಕ್ರೇನ್ ಸೈನಿಕರು ನಮ್ಮನ್ನು ಗಡಿಯವರೆಗೆ ಬಿಟ್ಟು ಬಂದರು. ನಂತರ ನಾವು ರೊಮೇನಿಯಾಕ್ಕೆ ತೆರಳಿ ಅಲ್ಲಿನ ಆಶ್ರಯ ಕೇಂದ್ರದಲ್ಲಿ ಉಳಿದುಕೊಂಡಿದ್ದೆವು.‌ ರೊಮೇನಿಯಾದಿಂದ ಭಾರತೀಯ ಅಧಿಕಾರಿಗಳು ಮುಂಬೈಗೆ ವಿಮಾನ ವ್ಯವಸ್ಥೆ ಮಾಡಿದ್ದು, ಇದೀಗ ಮುಂಬೈನಿಂದ ಇಲ್ಲಿಗೆ ಬಂದಿದ್ದೇನೆ ಎಂದು ಅನುಷಾ ತಿಳಿಸಿದರು.

ತಾಯಿ ವಿದ್ಯಾ ಭಟ್ ಹಾಗೂ ತಂದೆ ಹರೀಶ್ಚಂದ್ರ ಭಟ್ ಅವರು ವಿಮಾನ ನಿಲ್ದಾಣಕ್ಕೆ ಬಂದು ಮಗಳನ್ನು ಬರಮಾಡಿಕೊಂಡರು.

ADVERTISEMENT

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಕೂಡ ವಿಮಾನ ನಿಲ್ದಾಣದಲ್ಲಿ ಅನುಷಾ ಅವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.