ಮೂಲ್ಕಿ: ಇಲ್ಲಿನ ಮೂಲ್ಕಿ ಬಳಿಯ ಸಸಿಹಿತ್ಲು ಅಗ್ಗಿದಕಳಿಯದ ನಾರಾಯಣಗುರು ಸೇವಾ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಸುವರ್ಣ ಸಿರಿ ಬೀಚ್ ಫೆಸ್ಟಿವಲ್ಗೆ ಮುಂಬೈ ಶ್ರೀ ಕ್ಷೇತ್ರ ಪೂವಾಯಿಯ ಸುವರ್ಣ ಬಾಬಾ ಚಾಲನೆ ನೀಡಿದರು.
ನಾರಾಯಣಗುರುಗಳ ಜಾತ್ಯತೀತತೆಯ ಜಾಗೃತಿಯಿಂದ ಸಮಾಜ ಬೆಳೆದಿದೆ. ಸಂಘಟನಾತ್ಮಕವಾಗಿ ಬೆಳೆಯುವಾಗ ಜಾತಿ, ಮತ–ಭೇದವಿಲ್ಲದೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.
ಅಖಿಲ ಭಾರತ ದೇವಾಡಿಗ ಸಮಾಜ ಸಂಘಟನೆ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರಿಗೆ ಸುವರ್ಣಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನದ ಸಂಚಾಲಕ ರಮೇಶ್ ಪೂಜಾರಿ ಚೆಳ್ಯಾರು ಅಧ್ಯಕ್ಷತೆ ವಹಿಸಿದ್ದರು.
ಸಸಿಹಿತ್ಲು ಭಗವತೀ ಕ್ಷೇತ್ರದ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಹರೀಶ್ ಪೂಜಾರಿ, ಉದ್ಯಮಿ ಧನಂಜಯ ಶೆಟ್ಟಿ, ಎಲ್.ವಿ.ಅಮೀನ್ ಮುಂಬೈ, ಮೀನಾಕ್ಷಿ ಶಿಂದೆ ಠಾಣೆ, ಪಾಲಿಕೆ ವಿರೋಧ ಪಕ್ಷದ ನಾಯಕ ಅನಿಲ್ ಪೂಜಾರಿ, ಮುಂಬೈ ತೀಯ ಸಮಾಜದ ಚಂದ್ರಶೇಖರ ಬೆಳ್ಚಡ, ರಾಜಶೇಖರ ಕೋಟ್ಯಾನ್, ಶಿವಮೊಗ್ಗದ ಬಿಲ್ಲವ ಸಂಘದ ಭುಜಂಗ ಕೆ., ಸಿ.ಬಿ.ಕರ್ಕೇರ, ಮನೋಜ್ ನಾಗ್ಪಾಲ್ ಮುಂಬೈ, ಸತ್ಯಜಿತ್ ಸುರತ್ಕಲ್, ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್., ಆರೋಗ್ಯ ಇಲಾಖೆಯ ಉಲ್ಲಾಸ್ ರಂಗಯ್ಯ, ನಿಶ್ಚಲ್ ಶೆಟ್ಟಿ ವೈಷ್ಣವಿ ಕಾರ್ಗೊ, ಮಹಿಳಾ ಸಂಘದ ಸರೋಜಿನಿ ಶಾಂತಾರಾಜ್, ನರೇಶ್ ಸಸಿಹಿತ್ಲು, ಎಸ್.ಆರ್.ಪ್ರಭಾತ್, ದಿನೇಶ್ ಸುವರ್ಣ ರಾಯಿ, ಪ್ರಜ್ಞಾ ಒಡಿಲ್ನಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.