ಉಳ್ಳಾಲ: ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಶೌಚಾಲಯ ಬಳಸುವವರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.
ಇಲ್ಲಿನ ನಗರಸಭೆಯ 14ನೇ ಹಣಕಾಸಿನ ಅನುದಾನದಡಿ ಸುಮಾರು ₹22 ಲಕ್ಷ ವೆಚ್ಚದಡಿ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಿರ್ಮಿಸಿದ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಆಯೂಬ್ ಮಂಚಿಲ, ಪೌರಾಯುಕ್ತ ವಿದ್ಯಾ ಕೆ. ಕಾಳೆ, ಸದಸ್ಯರಾದ ರಾಜೇಶ್ ಕೆರೆಬೈಲ್, ಅಬ್ದುಲ್ ಅಜೀಜ್ ಕೋಡಿ, ಯು.ಎ. ಇಸ್ಮಾಯಿಲ್, ಮುಖಂಡರಾದ ಕಿಶೋರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಎಂಜಿನಿಯರ್ಗಳಾದ ವಿನೋದ್ ಕುಮಾರ್ ತುಳಸಿದಾಸ್, ಆರೋಗ್ಯ ನಿರೀಕ್ಷಕರುಗಳಾದ ರವಿಕೃಷ್ಣ, ಸಜಿತ್, ಗುತ್ತಿಗೆದಾರ ಗಿರೀಶ್, ಯೂಸುಫ್ ಉಳ್ಳಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.