ADVERTISEMENT

ದಕ್ಷಿಣ ಕನ್ನಡ: ಕಾಲೇಜು ಕಟ್ಟದ 4ನೇ ಮಹಡಿಯಿಂದ ಜಿಗಿದ ಮುಳ್ಳುಹಂದಿ ಸಾವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:53 IST
Last Updated 22 ಫೆಬ್ರುವರಿ 2026, 1:53 IST
ಮೃತಪಟ್ಟ ಮುಳ್ಳು ಹಂದಿ
ಮೃತಪಟ್ಟ ಮುಳ್ಳು ಹಂದಿ   

ಪುತ್ತೂರು: ಇಲ್ಲಿನ ನೆಹರೂನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ  ನಾಲ್ಕನೇ ಮಹಡಿಯಿಂದ ಜಿಗಿದ ಮುಳ್ಳುಹಂದಿಯೊಂದು ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

‌ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಅಟ್ಟಿಸಿಕೊಂಡು ಬಂದ ನಾಯಿಗಳಿಗೆ ಹೆದರಿದ ಮುಳ್ಳು ಹಂದಿ ಕಾಲೇಜಿನ ಹಿಂಭಾಗದ ಮೆಟ್ಟಿಲ ಮೂಲಕ ಕಾಲೇಜು ಕಟ್ಟಡ ಪ್ರವೇಶಿಸಿದೆ. ಅದನ್ನು ಗಮನಿಸಿದ ಸಿಬ್ಬಂದಿಯ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮುಳ್ಳುಹಂದಿಯನ್ನು ಹಿಡಿದು ರಕ್ಷಣೆ ಮಾಡುವ ಕಾರ್ಯಾಚರಣೆಗೆ ಇಳಿದರು.‌

ಕುತೂಹಲದಿಂದ ಸೇರಿದ್ದ ಜನರನ್ನು ಕಂಡು ಭಯಗೊಂಡ ಮುಳ್ಳುಹಂದಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಟ್ಟಡದ 4 ಮಹಡಿಗೆ ಓಡಿ ಕಿಟಿಕಿ ಮೂಲಕ ಹೊರಗೆ ಜಿಗಿದಿದೆ.

ADVERTISEMENT

ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.