ಸುರತ್ಕಲ್: ಕನಿಷ್ಠ ಐದು ಸಸಿ ನೆಟ್ಟು ಬೆಳೆಸುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಸಮಿತಿಗಳಿಗೆ ಪ್ರಥಮ ಬಹುಮಾನ ₹10 ಲಕ್ಷ , ದ್ವಿತೀಯ ₹ 5 ಲಕ್ಷ ಹಾಗೂ ತೃತೀಯ ಬಹುಮಾನವಾಗಿ ₹ 2 ಲಕ್ಷವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಘೋಷಿಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಸಕರು ಈ ಸ್ಪರ್ಧೆ ಘೋಷಿಸಿದ್ದು, ‘ಪ್ರತಿ ಬೂತ್ನಲ್ಲಿ ನೆಟ್ಟ ಗಿಡಗಳನ್ನು ವಾರ್ಷಿಕವಾಗಿ ಮೌಲ್ಯಮಾಪನ ಮಾಡಲಾಗುವುದು. ಅಲ್ಲದೇ, ಆ ಬೂತ್ ವ್ಯಾಪ್ತಿಗೆ ಶಾಸಕ ಪ್ರದೇಶಾಭಿವೃದ್ಧಿ ನಿಧಿಯಿಂದ ಹೆಚ್ಚುವರಿ ಅನುದಾನ ನೀಡಲಾಗುವುದು’ ಎಂದು ತಿಳಿಸಿದ್ದಾರೆ.
‘ನಾವು ಪ್ರತಿ ಬಾರಿ ವನಮಹೋತ್ಸವ, ವಿಶ್ವ ಪರಿಸರ ದಿನ ಆಚರಿಸುತ್ತೇವೆ. ಆದರೆ, ಉದ್ದೇಶ ಕಾರ್ಯಾನುಷ್ಠಾನ ಮಾಡುವ ಸಲುವಾಗಿ ಪಕ್ಷದ ಕಾರ್ಯಕರ್ತರಿಗೆ ಈ ಸ್ಪರ್ಧೆ ನೀಡಿದ್ದೇನೆ. ಕನಿಷ್ಠ 5 ಸಸಿಗಳನ್ನು ನೆಟ್ಟು ಬೆಳೆಸಬೇಕು. ಇದನ್ನು ನಾನೇ ಮೌಲ್ಯಮಾಪನ ಮಾಡುತ್ತೇನೆ. ಅರ್ಹ ಬೂತ್ಗೆ ಬಹುಮಾನ ನೀಡಲಾಗುವುದು’ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.