
ಬಂಟ್ವಾಳ: ತುಳುನಾಡಿನ ರೈತರ ಕಂಬಳ ಕ್ರೀಡೆ ಮನರಂಜನೆಗೆ ಸೀಮಿತವಾಗದೆ, ಧಾರ್ಮಿಕ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ ಎಂದು ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಹೇಳಿದರು.
ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಶನಿವಾರ ನಡೆದ 3ನೇ ವರ್ಷದ ವೀರ-ವಿಕ್ರಮ ಜೋಡುಕರೆ ಕಂಬಳ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ಕಂಬಳ ಕರೆ ಉದ್ಘಾಟಿಸಿದರು.
ಉದ್ಯಮಿ ಕರುಣಾಕರ ಶೆಟ್ಟಿ ಗೋಳಿದೊಟ್ಟು, ಕೊಯಿಲ ಮಹಾಗಣಪತಿ ದೇವಳದ ಮೊಕ್ತೇಸರ ಎಂ.ಪದ್ಮರಾಜ್ ಬಳ್ಳಾಲ್ ಮಾವಂತೂರು, ರೋಟರಿ ಮಾಜಿ ಸಹಾಯಕ ಗವರ್ನರ್ ಇಲ್ಯಾಸ್ ಸ್ಯಾಂಕ್ಟೀಸ್, ಜಿಲ್ಲಾ ತೀರ್ಪುಗಾರ ವಿಜಯಕುಮಾರ್ ಕಂಗಿನ ಮನೆ ಮಾತನಾಡಿದರು.
ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ವಸಂತ ಶೆಟ್ಟಿ ಕೇದಗೆ, ಸುಧಾಕರ ಚೌಟ ಬಾವ, ರಾಜೇಶ್ ಶೆಟ್ಟಿ ಸೀತಾಳ, ಬಾಬು ರಾಜೇಂದ್ರ ಶೆಟ್ಟಿ, ಸುದರ್ಶನ್ ಮಂಜಿಲ, ಸತೀಶ್ ಕುಮಾರ್ ಬಿ.ಸಿ.ರೋಡು, ಸುರೇಶ ಶೆಟ್ಟಿ ಕುತ್ಲೋಡಿ, ಶೇಖರ ಶೆಟ್ಟಿ ಬದ್ಯಾರು, ಪ್ರಭಾಕರ ಪ್ರಭು, ಪ್ರಜ್ವಲ್ ಶೆಟ್ಟಿ, ಕಿರಣ್ ಕುಮಾರ್ ಮಂಜಿಲ, ಶಶಿಧರ ಶೆಟ್ಟಿ ಕಲ್ಲಾಪು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಚಂದ್ರಶೇಖರ ಕೊಡಂಗೆ, ತಿಮರಡ್ಕ, ಉಮೇಶ್ ಶೆಟ್ಟಿ ಕೊನೆರೊಟ್ಟು, ಸಂದೇಶ್ ಆರ್.ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರೊಟ್ಟು, ನವೀನ್ ಹೆಗ್ಡೆ ಮಣಿಪಾಲ, ಉಮೇಶ್ ಹಿಂಗಾಣಿ, ಅವನ್ ಕುಮಾರ್ ಜೈನ್, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಬಿ.ಶಿವಾನಂದ ರೈ, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಗಣೇಶ ಶೆಟ್ಟಿ, ಓಬಯ ಪೂಜಾರಿ ಕೊಡಂಗೆ, ಕೊರಗಪ್ಪ ಪೂಜಾರಿ ಕೊಡಂಗೆ ಭಾಗವಹಿಸಿದ್ದರು.
ಶಿಫಾಲಿ ಉಮೇಶ್ ಹಿಂಗಾಣಿ ಪ್ರಾರ್ಥಿಸಿದರು. ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿ, ಕೋಶಾಧಿಕಾರಿ ರಾಘವೇಂದ್ರ ಭಟ್ ವಂದಿಸಿದರು. ಗೌರವ ಸಲಹೆಗಾರ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತು ನಿತೇಶ್ ಶೆಟ್ಟಿ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.