ಸುಳ್ಯ: ‘ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪದಗ್ರಹಣ ಸಮಾರಂಭ ಇದೇ 7ರಂದು ಬೆಳ್ಳಾರೆ ಕಾಮಧೇನು ಟವರ್ಸ್ನಲ್ಲಿ ನೆರವೇರಲಿದೆ’ ಎಂದು ನೂತನ ಅಧ್ಯಕ್ಷ ಎ.ಕೆ. ಮಣಿಯಾಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪದಗ್ರಹಣವನ್ನು ಪೂರ್ವ ಜಿಲ್ಲಾ ಗವರ್ನರ್ ಸೂರ್ಯಪ್ರಕಾಶ್ ಭಟ್ ನೆರವೇರಿಸುವರು. ಜಿಲ್ಲಾ ಸಹಾಯಕ ಗವರ್ನರ್ ಆಸ್ಕರ್ ಆನಂದ್, ಝೋನಲ್ ಲೆಫ್ಟಿನೆಂಟ್ ರವೀಂದ್ರ ಗೌಡ ಹಾಗೂ ಸುಳ್ಯ ರೋಟರಿ ಕ್ಲಬ್ನ ಅಧ್ಯಕ್ಷ ರೊ. ದಯಾನಂದ ಆಳ್ವ ಮುಖ್ಯ ಅತಿಥಿಗಳಾಗಿವರು. ವಿನಯಕುಮಾರ್, ಶ್ಯಾಮಸುಂದರ ರೈ, ರವೀಂದ್ರ ಗೌಡ, ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ, ಗೋಪಾಲಕೃಷ್ಣ ಪಿ.ಎಸ್. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.