ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಂದ ವರ್ಗಾವಣೆ ಆಗಿರುವ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಶನಿವಾರ ಇಲ್ಲಿನ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ
ನಿವಾಸದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಜ್ಯೋತಿರ್ಲಿಂಗ ಹೊನಕಟ್ಟಿ, ಸಿದ್ಧಗೌಡ ಭಜಂತ್ರಿ, ಅಶೋಕ್ ಪಿ., ಲೋಕೇಶ್ ಎ.ಸಿ., ಗುರುದತ್ ಕಾಮತ್, ರೇವತಿ ಎನ್. ಅವರನ್ನು ಬೀಳ್ಕೊಡಲಾಯಿತು. ರಾಜ್ಯ ಗುಪ್ತವಾರ್ತೆಯಲ್ಲಿದ್ದ ಮಂಜುನಾಥ ಪಾಂಡೇಶ್ವರ ಠಾಣೆಗೆ ವರ್ಗಾವಣೆ ಆಗಿದ್ದು, ಅವರನ್ನು ಸ್ವಾಗತಿಸಲಾಯಿತು.
ಕಮಿಷನರ್ ಎನ್.ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ಬಿ.ಪಿ. ದಿನೇಶ್ ಕುಮಾರ್, ಚನ್ನವೀರಪ್ಪ ಹಡಪದ್, ಎಸಿಪಿಗಳಾದ ದಿನಕರ ಶೆಟ್ಟಿ, ರವೀಶ್ ನಾಯಕ್, ಮುರುಗೆಪ್ಪ ಉಪಾಸೆ, ಎಂ.ಎ.ನಟರಾಜ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.