ಮಂಗಳೂರು: ಆ.18ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ. ಕೃಷ್ಣ ಹುಟ್ಟುವ ಹಬ್ಬದ ಆಚರಣೆಗೆ ಇಸ್ಕಾನ್, ಕೃಷ್ಣ ದೇಗುಲಗಳು ಸಜ್ಜುಗೊಂಡಿವೆ. ಮನೆಗಳಲ್ಲೂ ಕೃಷ್ಣನ ಆರಾಧನೆಗೆ ತಯಾರಿ ನಡೆದಿದೆ.
ಕೃಷ್ಣಾಷ್ಟಮಿ ವಿಶೇಷವಾಗಿರುವ ಮೂಡೆ (ತೆಂಗಿನ ಒಲಿ) ಹಾಗೂ ಕೊಟ್ಟಿಗೆಗೆ ಬುಧವಾರ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಕಂಡುಬಂತು. ರಥಬೀದಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೂಡೆ ಹಾಗೂ ಕೊಟ್ಟಿಗೆಗಳ ಮಾರಾಟ ಬಿರುಸಾಗಿದೆ. ಮೂಡೆಯ ಬೆಲೆ ಇತರ ದಿನಗಳಲ್ಲಿ ₹ 100ಕ್ಕೆ 8–9 ಮೂಡೆಗಳು ಲಭ್ಯವಾಗುತ್ತಿದ್ದರೆ, ಅಷ್ಟಮಿ ಸಂದರ್ಭದಲ್ಲಿ ₹ 100ಕ್ಕೆ 3–4 ಮಾತ್ರ ಸಿಗುತ್ತಿತ್ತು. ಕೊಟ್ಟಿಗೆ ₹ 100ಕ್ಕೆ ಎಂಟರಂತೆ ಮಾರಾಟವಾಯಿತು. ವಿವಿಧೆಡೆಗಳಿಂದ ಬಂದ ವ್ಯಾಪಾರಿಗಳು ಮೂಡೆ, ಕೊಟ್ಟಿಗೆ ಮಾರಾಟ ಮಾಡಿದರು. ಹೂವಿನ ವ್ಯಾಪಾರವೂ ಜೋರಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.