ADVERTISEMENT

ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಲೋಪ: ಪೈಲಟ್‌ಗಳ ಲೈಸೆನ್ಸ್ ರದ್ದು

ಪಿಟಿಐ
Published 13 ಫೆಬ್ರುವರಿ 2020, 12:24 IST
Last Updated 13 ಫೆಬ್ರುವರಿ 2020, 12:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ತಪ್ಪು ಮಾಡಿದ್ದ ಇಬ್ಬರು ಸ್ಪೈಸ್‌ಜೆಟ್‌ಪೈಲಟ್‌ಗಳ ಪರವಾನಗಿಯನ್ನು (ಲೈಸೆನ್ಸ್) ನಾಲ್ಕೂವರೆ ತಿಂಗಳ ಅವಧಿಗೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ)ಪ್ರಧಾನ ನಿರ್ದೇಶಕರು ಅಮಾನತು ಮಾಡಿದ್ದಾರೆ.

ಲ್ಯಾಂಡಿಂಗ್ ವೇಳೆ ಮಾಡಿದ ತಪ್ಪಿನಿಂದವಿಮಾನ ನಿಲ್ದಾಣದರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು. ಲೋಪದ ಬಗ್ಗೆ ತನಿಖೆ ನಡೆಸಿದ್ದ ನಿರ್ದೇಶನಾಲಯವು ಪೈಲಟ್‌ಗಳ ಲೋಪ ಸಾಬೀತಾದ ಕಾರಣ ಪರವಾನಗಿ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಪ್ರಕಟಣೆ ತಿಳಿಸಿದೆ.

ಲೋಪಕ್ಕೆ ಸಂಬಂಧಿಸಿದಂತೆಪೈಲಟ್ ಇನ್ ಕಮಾಂಡ್ ಮತ್ತು ಫಸ್ಟ್‌ ಆಫೀಸರ್‌ಗಳು ನೀಡಿರುವ ಉತ್ತರವನ್ನುಡಿಜಿಸಿಎ ಒಪ್ಪಿಕೊಂಡಿಲ್ಲ. ಅವರಿಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಕಟಣೆ ಹೇಳಿದೆ.

ADVERTISEMENT

ವಿಮಾನವು ನೆಲವನ್ನು ಸ್ಪರ್ಶಿಸಿದ ರೀತಿ ಸರಿಯಿರಲಿಲ್ಲ. ರನ್‌ ವೇಯಿಂದ ಎಡಕ್ಕೆ ವಿಮಾನ ಜಾರಿತ್ತು. ಹೀಗಾಗಿ ರನ್‌ ವೇ ಅಂಚಿನ ದೀಪಗಳಿಗೆ ಹಾನಿಯಾಗಿತ್ತು ಎಂಬ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಮಂಗಳೂರಿನಲ್ಲಿ ಲ್ಯಾಂಡ್ ಆಗಿದ್ದ ಸ್ಪೈಸ್‌ಜೆಟ್‌ನ ಬೋಯಿಂಗ್ 737 ವಿಮಾನವು ದುಬೈನಿಂದ ಪ್ರಯಾಣ ಆರಂಭಿಸಿತ್ತು. ತಪ್ಪು ಮಾಡಿದ್ದಇಬ್ಬರೂ ಪೈಲಟ್‌ಗಳನ್ನೂ ಸ್ಪೈಸ್‌ಜೆಟ್‌ ಅಮಾನತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.