ಸುಳ್ಯ (ದಕ್ಷಿಣ ಕನ್ನಡ): ಕೊಡಗು ಸಂಪಾಜೆಯಿಂದ ಮಾರ್ಪಡ್ಕ ಸೇತುವೆ ಮೂಲಕ ಚೆಂಬು ಗ್ರಾಮದ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಎಂಬಲ್ಲಿ ನೀರಿನ ಸೆಳೆತಕ್ಕೆ ಮೋರಿಯೊಂದು ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕೊಡಗು ಸಂಪಾಜೆಯಿಂದ ಇಲ್ಲಿನ ಊರುಬೈಲು, ಬಾಲೆಂಬಿ ಸಂಪರ್ಕಿಸುವ ರಸ್ತೆಯಿದು. ಈ ರಸ್ತೆಯಲ್ಲಿ ಸಿಗುವ ಮಾರ್ಪಡ್ಕ ಸೇತುವೆಯೂ ಅಪಾಯಕಾರಿ ಸ್ಥಿತಿಯಲ್ಲಿದ್ದು, ಆ.2ರಂದು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರಿನ ಸೆಳೆತಕ್ಕೆ ರಸ್ತೆ ಸಂಚಾರ ಕಡಿತಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.