ADVERTISEMENT

‘ಸುರತ್ಕಲ್‌ ವೃತ್ತಕ್ಕೆ ವಿವಾದಿತ ವ್ಯಕ್ತಿಯ ಹೆಸರಿಡದಿರಿ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 15:48 IST
Last Updated 3 ಅಕ್ಟೋಬರ್ 2022, 15:48 IST
ಸುರತ್ಕಲ್‌ ವೃತ್ತಕ್ಕೆ ವಿವಾದಿತ ವ್ಯಕ್ತಿಯ ಹೆಸರು ಇಡಬಾರದು ಎಂದು ಒತ್ತಾಯಿಸಿ ಮುಸ್ಲಿಂ ಐಕ್ಯತಾ ಸಮಿತಿಯ ಸುರತ್ಕಲ್‌ ವಲಯದ ಪ್ರಮುಖರ ನಿಯೋಗವು ಡಾ.ರಾಜೇಂದ್ರ ಕೆ.ವಿ.ಅವರಿಗೆ ಸೋಮವಾರ ಮನವಿ ಸಲ್ಲಿಸಿತು.
ಸುರತ್ಕಲ್‌ ವೃತ್ತಕ್ಕೆ ವಿವಾದಿತ ವ್ಯಕ್ತಿಯ ಹೆಸರು ಇಡಬಾರದು ಎಂದು ಒತ್ತಾಯಿಸಿ ಮುಸ್ಲಿಂ ಐಕ್ಯತಾ ಸಮಿತಿಯ ಸುರತ್ಕಲ್‌ ವಲಯದ ಪ್ರಮುಖರ ನಿಯೋಗವು ಡಾ.ರಾಜೇಂದ್ರ ಕೆ.ವಿ.ಅವರಿಗೆ ಸೋಮವಾರ ಮನವಿ ಸಲ್ಲಿಸಿತು.   

ಮಂಗಳೂರು:ಸುರತ್ಕಲ್ ವೃತ್ತಕ್ಕೆ ಯಾವುದೇ ವಿವಾದಿತ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಬಾರದು. ಅದರ ಬದಲು, ಕೋಟಿ ಚೆನ್ನಯ, ಮಂಗಳೂರಿನ ನಿರ್ಮಾತೃ ಯು.ಶ್ರೀನಿವಾಸ ಮಲ್ಯ ಅಥವಾ ಕಾರ್ಮಿಕ ಹೋರಾಟಗಾರ ಎಂ.ಲೋಕಯ್ಯ ಶೆಟ್ಟಿ ಅವರಲ್ಲಿ ಒಂದು ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಬೇಕು ಎಂದು ಮುಸ್ಲಿಂ ಐಕ್ಯತಾ ವೇದಿಕೆ ಒತ್ತಾಯಿಸಿದೆ.

ವೇದಿಕೆಯ ಸುರತ್ಕಲ್‌ ವಲಯದ ಅಧ್ಯಕ್ಷ ಅಶ್ರಫ್ ಬದ್ರಿಯಾ ನೇತೃತ್ವದ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರನ್ನು ಸೋಮವಾರ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತು.

ನಿಯೋಗದಲ್ಲಿ ವೇದಿಕೆಯ ಸುರತ್ಕಲ್‌ ವಲಯದ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅದ್ದು, ಕಾರ್ಯದರ್ಶಿ ಕೆ.ಷರೀಫ್, ಸದಸ್ಯರಾದ ಅಜೀಜ್‌ ಇದ್ದರು.

ADVERTISEMENT

ಸುರತ್ಕಲ್‌ ವೃತ್ತಕ್ಕೆ ‘ವೀರ ಸಾವರ್ಕರ್ ವೃತ್ತ’ ಎಂದು ನಾಮಕರಣ ಮಾಡುವ ಕುರಿತು ಶಾಸಕ ಡಾ.ವೈ.ಭರತ್ ಶೆಟ್ಟಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದ್ದ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯುಈ ಪ್ರಸ್ತಾವಕ್ಕೆ ಪೂರಕವಾದ ವರದಿಯನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸಿದೆ. ಈ ವರದಿಯನ್ನು ಸೆ. 30ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸ್ಥಿರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.