ಮಂಗಳೂರು: ತೌಕ್ತೆ ಚಂಡಮಾರುತದ ಪರಿಣಾಮ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಉಳ್ಳಾಲ ಬಳಿ ನಿರ್ಮಿಸುತ್ತಿರುವ ಹರೇಕಳ - ಅಡ್ಯಾರ್ ಅಣೆಕಟ್ಟೆ ಕಾಮಗಾರಿಗೆ ಹಾನಿಯಾಗಿದೆ. ಕಾಮಗಾರಿಗೆ ಅಡ್ಡಹಾಕಲಾದ ಮಣ್ಣು, ಸಲಕರಣೆಗಳು ನೀರುಪಾಲಾಗಿವೆ.
ಏಕಾಏಕಿ ಉಕ್ಕಿ ಹರಿದ ನೇತ್ರಾವತಿ ನದಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.