ADVERTISEMENT

ಮಂಗಳೂರು | ಸಮುದ್ರದಲ್ಲಿ ಅಪಾಯದಲ್ಲಿದ್ದ ಯುವಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 13:54 IST
Last Updated 28 ಜೂನ್ 2020, 13:54 IST
ಕಡಲಿನಲ್ಲಿ ಅಪಾಯದಲ್ಲಿದ್ದ ಯುವಕನನ್ನು ಸ್ಥಳೀಯರು ದಡಕ್ಕೆ ಕರೆತಂದರು.
ಕಡಲಿನಲ್ಲಿ ಅಪಾಯದಲ್ಲಿದ್ದ ಯುವಕನನ್ನು ಸ್ಥಳೀಯರು ದಡಕ್ಕೆ ಕರೆತಂದರು.   

ಮಂಗಳೂರು: ಗುಡ್ಡಕೊಪ್ಲ ಕಡಲ ಕಿನಾರೆಗೆ ಬಂದಿದ್ದ ಪುತ್ತೂರಿನ ಯುವಕನ್ನು ಮೀನುಗಾರರು ರಕ್ಷಿಸಿದ್ದಾರೆ.

ವಿಹಾರಕ್ಕೆ ಬಂದ ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಗೂ ಗಮನ ಕೊಡದೆ ಕಡಲಲ್ಲಿ ಈಜುತ್ತಿರುವಾಗ ಕಡಲ ಅಲೆ ಅವರನ್ನು ಕಡಲ ಮಧ್ಯದಲ್ಲಿ ಎಳೆದೊಯ್ಯಿತು.

ಮುಳುಗುವ ಹಂತದಲ್ಲಿ ಇರುವ ಡ್ರಜ್ಜರನ್ನು ಹಿಡಿದ ಯುವಕ ಸಹಾಯಕ್ಕೆ ಅಂಗಲಾಚುತ್ತಿದ್ದ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಲಿ ಕರಾವಳಿ ರಕ್ಷಣಾ ಪಡೆಗಾಗಲಿ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ADVERTISEMENT

ಸ್ಥಳೀಯ ಮೊಗವೀರ ಯುವಕರಾದ ಯಾದವ ಶ್ರೀಯಾನ್ ಮತ್ತು ಸುಮನ್ ಈಜುತ್ತಾ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.