ADVERTISEMENT

ನಿರಂತರ ವಿದ್ಯುತ್ ಪೂರೈಸಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 8:35 IST
Last Updated 7 ಜೂನ್ 2011, 8:35 IST

ದಾವಣಗೆರೆ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನೀರಿನ ಸರಬರಾಜು ಮಾಡುವ ಪಂಪ್‌ಹೌಸ್‌ಗಳಿಗೆ ನಿರಂತರವಾಗಿ ವಿದ್ಯುತ್ ನೀಡಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷ ನಾಯಕ ಡಿ.ಎನ್. ಜಗದೀಶ್ ಒತ್ತಾಯಿಸಿದ್ದಾರೆ.

6-7 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು, ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಮೂರೂ ಕೇಂದ್ರಗಳಿಗೂ ವಿದ್ಯುತ್ ನಿಲುಗಡೆ ಮಾಡದೇ ವಿದ್ಯುತ್ ಸರಬರಾಜು ಮಾಡಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಡಿ.ಎನ್. ಜಗದೀಶ್, ದಿನೇಶ್ ಕೆ. ಶೆಟ್ಟಿ, ಗಿರೀಶ್ ಕಾರ್ನಾಡ್, ಎ. ನಾಗರಾಜ್, ಆಟೋ ಸಂಘದ ತಿಮ್ಮಣ್ಣ, ಡಿ. ಬಸವರಾಜು ಮತ್ತಿತರ ಮುಖಂಡರು ಅಧೀಕ್ಷಕ ಎಂಜಿನಿಯರ್ ಕೋಟ್ಯಪ್ಪ ಹಾಗೂ ಗ್ಯಾನಪ್ಪ ಅವರಲ್ಲಿ ಮನವಿ ಮಾಡಿದರು."

ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಈ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ನಿಗಾವಹಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.