ದಾವಣಗೆರೆ: ಸರ್ಕಾರ ಒಪ್ಪಿಗೆ ನೀಡಿದರೆ 18 ವರ್ಷದಿಂದ 44 ವರ್ಷದವರೆಗಿನವರಿಗೂ ಲಸಿಕೆ ನೀಡಲು ಸಿದ್ಧ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
‘ಇಲ್ಲಿನ ಜನರಿಗೆ ಉಚಿತವಾಗಿ ಕೋವಿಶೀಲ್ಡ್ ಲಸಿಕೆ ನೀಡುತ್ತಿದ್ದೇನೆ. ಸರ್ಕಾರದ ಸೂಚನೆಯಂತೆ 45 ವರುಷದ ಮೇಲಿನವರಿಗೆ ಮಾತ್ರ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಬಳಿ 2 ದಿನಗಳ ಹಿಂದೆ ಲಸಿಕೆ ಉದ್ಘಾಟನೆಗೊಂಡಿದ್ದು, ಸಾವಿರಾರು ಮಂದಿ ಲಸಿಕೆ ಹಾಕಿಸಿಕೊಂಡು ಆರೋಗ್ಯವಾಗಿದ್ದಾರೆ. 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡುವಂತೆ ಸಾಕಷ್ಟು ಬೇಡಿಕೆ ಇದೆ. ಸರ್ಕಾರ ನಿರ್ಬಂಧ ಹೇರಿದ್ದು, ಇದನ್ನು ತೆರವುಗೊಳಿಸಿದರೆ ನಾವು 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡುತ್ತೇವೆ’ ಎಂದು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.