ದಾವಣಗೆರೆ: ತಾಲ್ಲೂಕಿನ ಕಾಟೇಹಳ್ಳಿ ಲಂಬಾಣಿ ತಾಂಡಾದ ಬಳಿ ಮನೆಯ ಹೊರಗೆ ಕಟ್ಟಿಹಾಕಿದ್ದ ₹ 45 ಸಾವಿರ ಮೌಲ್ಯದ ಜರ್ಸಿ ಹಸುವನ್ನು ಕಳ್ಳರು ವಾಹನದಲ್ಲಿ ಹೊತ್ತೊಯ್ಯುತ್ತಿದ್ದಾರೆ. ಈ ವೇಳೆ ಬೈಕ್ನಲ್ಲಿ ಬೆನ್ನಟ್ಟಿದ್ದರೂ ಕಳ್ಳರು ಪರಾರಿಯಾಗಿದ್ದಾರೆ.
ತಾಂಡಾದ ಮಂಜನಾಯ್ಕ ಹಸು ಕಳೆದುಕೊಂಡವರು. ಶುಕ್ರವಾರ ರಾತ್ರಿ ಮನೆಯ ಹಸುಗಳು ಕಾಣದೇ ಇದ್ದಾಗ ಮಂಜನಾಯ್ಕ ಅವರು ಕಿರಣಕುಮಾರ ಹಾಗೂ ಮೋಹನ್ ಅವರ ಜೊತೆಯಲ್ಲಿ ಬೈಕ್ನಲ್ಲಿ ಹಸುಗಳನ್ನು ಹುಡುಕಿಕೊಂಡು ಹೊರಟ್ಟಿದ್ದ ಊರಿನ ಕಡೆಯಿಂದ ಬಂದ ವಾಹನದಲ್ಲಿ ಎರಡು ಹಸುಗಳು ಪತ್ತೆಯಾದವು.
ಹುಣಸೆಕಟ್ಟೆಯ ಕಡೆಗೆ ಹೋಗುತ್ತಿದ್ದ ವಾಹನಕ್ಕೆ ಕೈತೋರಿದರೂ ನಿಲ್ಲಿಸಲಿಲ್ಲ. ಆ ವೇಳೆ ಬೈಕ್ನಲ್ಲಿ ವಾಹವನ್ನು ಬೆನ್ನತ್ತಿದ್ದಾಗ ವಾಹನವು ಚಿತ್ರದುರ್ಗದ ಕಡೆಗೆ ಹೊರಟಿದ್ದು, ಕೊಳಹಾಳ್ ಗ್ರಾಮದ ಬಳಿ ಹಂಪ್ಸ್ ಇದ್ದುದರಿಂದ ಹಿಂಬದಿಯ ಬಾಗಿಲು ಬಿಚ್ಚಿಕೊಂಡು ಒಂದು ಹಸು ಕೆಳಗೆ ಬಿದ್ದಿದೆ. ಮತ್ತೊಂದು ಹಸು ಕಳವಾಗಿದೆ.
ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.