ADVERTISEMENT

ಹೊನ್ನಾಳಿ: ವಿದ್ಯುತ್ ತಗುಲಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 6:35 IST
Last Updated 10 ಜನವರಿ 2024, 6:35 IST
ಎಲ್.ಆರ್. ಭಾನು
ಎಲ್.ಆರ್. ಭಾನು   

ಹೊನ್ನಾಳಿ: ತಾಲ್ಲೂಕಿನ ಕೆಂಗಲಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಗುಲಿ ಯುವಕ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಅಡಿಕೆ ತೋಟದಲ್ಲಿ ಸುಮಾರು 60 ಅಡಿ ಉದ್ದದ ಅಲ್ಯೂಮಿನಿಯಂ ರಾಡ್‌ಗೆ ಕುಡುಗೋಲು ಕಟ್ಟಿಕೊಂಡು ಅಡಕೆ ಕಟಾವ್ ಮಾಡಲು ಹೋಗಿದ್ದ ಎಲ್.ಆರ್.ಭಾನು (29) ಎಂಬ ಯುವಕ ಕುಡುಗೋಲಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಅಡಿಕೆ ತೋಟದಲ್ಲಿ ಅಡಿಕೆ ಕಟಾವ್ ಮಾಡುವಾಗ ತೋಟದ ಬದುವಿನಲ್ಲಿದ್ದ 11 ಕೆವಿಐಪಿ ಮಾರ್ಗ ಚಾಲನೆಯಲ್ಲಿದ್ದಿದ್ದರಿಂದ ಅದಕ್ಕೆ ಕುಡುಗೋಲು ತಗಲಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಸ್ಕಾಂ ಎಇಇ ಅವರು ಘಟನೆಯ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಕೊಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.