ಚನ್ನಗಿರಿ: ತಾಲ್ಲೂಕು ಹಿರೇಮಳಲಿ ಗ್ರಾಮದ ಬಳಿ ತಿರುಮಲ ಬಾರ್ ಮುಂದೆ ರಸ್ತೆಯಲ್ಲಿ ಮಂಗಳವಾರ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಬೈಕ್ಗಳ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹಿರೇಮಳಲಿ ಗ್ರಾಮದ ವಾಸಿ ತಿಪ್ಪೇಶ್(42) ಹಾಗೂ ಮೇಳನಾಯಕನಕಟ್ಟೆ ಗ್ರಾಮದ ಅರುಣ್(35) ಮೃತಪಟ್ಟವರು. ನಲ್ಲೂರಿನಿಂದ ಹಿರೇಮಳಲಿ ಗ್ರಾಮಕ್ಕೆ ಬರುತ್ತಿದ್ದ ತಿಪ್ಪೇಶ್ ಹಾಗೂ ನಲ್ಲೂರು ಗ್ರಾಮದ ಕಡೆ ಬರುತ್ತಿದ್ದ ಅರುಣ್ ಅವರ ಬೈಕ್ಗಳು ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟರು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.