ADVERTISEMENT

ಶಾಸಕರೆಲ್ಲ ಸಿಎಂ ಮಕ್ಕಳಂತೆ ಇದ್ದೇವೆ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 10:26 IST
Last Updated 9 ಫೆಬ್ರುವರಿ 2020, 10:26 IST

ನ್ಯಾಮತಿ:ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಗೊಂದಲ ಆಗಬಾರದು. ಶಾಸಕರೆಲ್ಲ ಮುಖ್ಯಮಂತ್ರಿಯ ಮಕ್ಕಳು ಇದ್ದಂತೆ ಎಂದು ಸಿಎಂರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನಸೂರಗೊಂಡನಕೊಪ್ಪ ಗ್ರಾಮದಲ್ಲಿಶನಿವಾರ ಸಂತ ಸೇವಾಲಾಲ್ ಅವರ ಜಯಂತ್ಯುತ್ಸವ ಸಿದ್ಧತೆ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜಾತಿ, ಉಪಜಾತಿ, ಸ್ವಾಮೀಜಿ, ಮಠಾಧೀಶರ ಬಗ್ಗೆ ಮಾತನಾಡುವುದಿಲ್ಲ. ನಾನು ಜಾತ್ಯಾತೀತ ವ್ಯಕ್ತಿ. ನನ್ನ ಕ್ಷೇತ್ರದ ಜನರು ನಾನು ಸಚಿವರಾಗಲಿ ಎಂದು ಗೆಲ್ಲಿಸಿಲ್ಲ, ಕ್ಷೇತ್ರದ ಅಭಿವೃದ್ಧಿ ಮಾತ್ರ ನನ್ನ ಧ್ಯೇಯ’ ಎಂದರು.

ADVERTISEMENT

‘ರಾಜಕೀಯದಲ್ಲಿ ನಾನು ಏನು ತಪ್ಪು ಮಾಡಿದ್ದೇನೆ ಎಂದು ವರಿಷ್ಠರು ನನಗೆ ಕಡಿವಾಣ ಹಾಕುತ್ತಾರೆ.ನನಗೆ ಯಾವ ಹೈಕಮಾಂಡ್ ಕಡಿವಾಣ ಹಾಕಿಲ್ಲ. ಪ್ರಬುದ್ದ ರಾಜಕಾರಣಿ ಆಗಬೇಕು ಎಂಬ ಉದ್ದೇಶದಿಂದ ನನ್ನ ಮಾತುಗಳಿಗೆ ಸ್ವಯಂ ಕಡಿವಾಣ ಹಾಕಿಕೊಂಡಿದ್ದೇನೆ. ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬೇಕು ಎಂದು ಹೇಳುತ್ತೇನೆ ಇದು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಜೀವನದಲ್ಲಿ ಮಹತ್ವಾಂಕಾಕ್ಷೆ ಇದೆ. ರಾಜಕೀಯದಲ್ಲಿ ನಾನು ಇನ್ನೂ ಚಿಕ್ಕವನು. ಇಡೀ ರಾಜ್ಯಕ್ಕೆ ಹೊನ್ನಾಳಿ ಸಂಪರ್ಕ ಸೇತುವೆಯಾಗಿದ್ದು, ದಿ. ಎಚ್.ಎಸ್. ರುದ್ರಪ್ಪ ಮತ್ತು ಪರಮೇಶ್ವರಪ್ಪ ಅವರ ನಂತರ ಮೂರು ದಶಕಗಳ ನಂತರ ನಾನು ಸಚಿವನಾಗಿದ್ದು ನನ್ನ ಪುಣ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.