ADVERTISEMENT

ಕಪ್ಪು ಶಿಲೀಂಧ್ರ: ನಾಲ್ವರು ಗುಣಮುಖ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 5:06 IST
Last Updated 20 ಜೂನ್ 2021, 5:06 IST
ಕಪ್ಪು ಶಿಲೀಂಧ್ರ
ಕಪ್ಪು ಶಿಲೀಂಧ್ರ   

ದಾವಣಗೆರೆ: ಕಪ್ಪು ಶಿಲೀಂಧ್ರ ಪ್ರಕರಣ ಶನಿವಾರ ಪತ್ತೆಯಾಗಿಲ್ಲ. ಆದರೆ ನಾಲ್ವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 91 ಮಂದಿಯಲ್ಲಿಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದ್ದು, ಅದರಲ್ಲಿ ಒಟ್ಟು 41 ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 54 ಪ್ರಕರಣ ದೃಢಪಟ್ಟಿದ್ದು, 25 ಮಂದಿ ಗುಣಮುಖರಾಗಿದ್ದಾ‌ರೆ. ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ 34 ಮಂದಿಯಲ್ಲಿ ಶಿಲೀಂಧ್ರ ಕಾಣಿಸಿಕೊಂಡಿದ್ದು, 15 ಮಂದಿ ಗುಣಮುಖರಾಗಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಬಿಡುಗಡೆಗೊಂಡಿದ್ದಾರೆ. ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಕೊರೊನಾದಿಂದ 11 ಮಂದಿ ಸಾವು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 11 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ.

ADVERTISEMENT

ದಾವಣಗೆರೆ ತಾಲ್ಲೂಕಿನ ಜೆ.ಸಿ. ಬಡಾವಣೆಯ 58 ವರ್ಷದ ಮಹಿಳೆ, ಹಳೇಬಾತಿಯ 49 ವರ್ಷದ ಪುರುಷ, ಕೆಂಚಮ್ಮನಹಳ್ಳಿಯ 55 ವರ್ಷದ ಪುರುಷ, ಎಸ್‌ಒಜಿ ಕಾಲೊನಿಯ 30 ವರ್ಷದ ಯುವಕ, ಕೆರೆಯಂಗಳಹಳ್ಳಿಯ 58 ಮತ್ತು 47 ವರ್ಷದ ಪುರುಷರು, ವಿದ್ಯಾನಗರದ 66 ವರ್ಷದ ವೃದ್ಧೆ, ಕಕ್ಕರಗೊಳ್ಳದ 43 ವರ್ಷದ ಪುರುಷ, ಆಲೂರಿನ 60 ವರ್ಷದ ವೃದ್ಧೆ, ಹರಪನಹಳ್ಳಿಯ 62 ವರ್ಷದ ವೃದ್ಧ, 58 ವರ್ಷದ ಮಹಿಳೆ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 62, ಹರಿಹರ ತಾಲ್ಲೂಕಿನಲ್ಲಿ 30, ಚನ್ನಗಿರಿ ತಾಲ್ಲೂಕಿನಲ್ಲಿ 35, ಹೊನ್ನಾಳಿ ತಾಲ್ಲೂಕಿನ 37, ಜಗಳೂರು ತಾಲ್ಲೂಕಿನಲ್ಲಿ 25 ಮಂದಿಗೆ ಕೊರೊನಾ ಬಂದಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 5 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.