ADVERTISEMENT

ಚನ್ನಗಿರಿ: ಗಾಳಿಯ ರಭಸಕ್ಕೆ ಮುರಿದ ರಂಬೆ–ಕೊಂಬೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:24 IST
Last Updated 10 ಏಪ್ರಿಲ್ 2025, 14:24 IST
ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದ ಬಳಿ ರಸ್ತೆಯಲ್ಲಿ ಬುಧವಾರ ರಾತ್ರಿ ರಭಸವಾಗಿ ಬೀಸಿದ ಗಾಳಿಗೆ ಮರದ ರೆಂಬೆ, ಕೊಂಬೆಗಳು ಮುರಿದುಕೊಂಡು ರಸ್ತೆಗೆ ಬಿದ್ದಿರುವುದು.
ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದ ಬಳಿ ರಸ್ತೆಯಲ್ಲಿ ಬುಧವಾರ ರಾತ್ರಿ ರಭಸವಾಗಿ ಬೀಸಿದ ಗಾಳಿಗೆ ಮರದ ರೆಂಬೆ, ಕೊಂಬೆಗಳು ಮುರಿದುಕೊಂಡು ರಸ್ತೆಗೆ ಬಿದ್ದಿರುವುದು.   

ಚನ್ನಗಿರಿ: ತಾಲ್ಲೂಕಿನ ಹಿರೇಮಳಲಿ ಗ್ರಾಮದ ಸುತ್ತಮುತ್ತ ಬುಧವಾರ ರಾತ್ರಿ ರಭಸವಾಗಿ ಬೀಸಿದ ಗಾಳಿಯಿಂದಾಗಿ ನಲ್ಲೂರು-ಮಾವಿನಕಟ್ಟೆ ರಸ್ತೆಯಲ್ಲಿನ ಮರಗಳ ರೆಂಬೆ, ಕೊಂಬೆಗಳು ಮುರಿದು ರಸ್ತೆಗೆ ಬಿದ್ದಿವೆ. 

ಹಿರೇಮಳಲಿ, ಭೈರನಹಳ್ಳಿ, ಗಾಳಿಹಳ್ಳಿ, ಜಯಂತಿ ನಗರ, ಮೇಳನಾಯಕನಕಟ್ಟೆ, ಬಿಆರ್‌ಟಿ ಕಾಲೊನಿ, ಚನ್ನೇಶಪುರ ಮುಂತಾದ ಗ್ರಾಮಗಳಲ್ಲಿ ಮೊದಲ ಮಳೆಯ ಸಿಂಚನವಾಗಿದೆ.

ರೆಂಬೆ, ಕೊಂಬೆಗಳು ಮುರಿದು ಬಿದ್ದಿದ್ದರಿಂದ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.