ADVERTISEMENT

ದಾವಣಗೆರೆ: ಸುಮ್ಮನೆ ಓಡಾಡುವವರಿಗೆ ಬಸ್ಕಿ ಶಿಕ್ಷೆ, ಲಾಠಿ ರುಚಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 11:40 IST
Last Updated 26 ಮಾರ್ಚ್ 2020, 11:40 IST
   

ದಾವಣಗೆರೆ: ಇಲ್ಲಿನ ಹದರಡಿ ರಸ್ತೆಯಲ್ಲಿ ಕಾರಣವಿಲ್ಲದೇ ಓಡಾಡುತ್ತಿದ್ದವರಿಗೆ ಟ್ರಾಫಿಕ್‌ ಪೊಲೀಸರು ಬಸ್ಕಿ ತೆಗೆಸಿ, ಲಾಠಿ ಬಿಸಿ ಮುಟ್ಟಿಸಿ ಕಳುಹಿಸಿದರು.

ಟ್ರಾಫಿಕ್‌ ಎಸ್‌ಐ ಮಂಜುನಾಥ ಅರ್ಜುನ್‌ ಲಿಂಗಾರೆಡ್ಡಿ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿದರು. ಬೈಕಲ್ಲಿ ಸುಖಾಸುಮ್ಮನೆ ತಿರುಗಾಡುವ ಯುವಕರನ್ನು ನಿಲ್ಲಿಸಿ, ಹೊರಟಿದ್ದೆಲ್ಲಿಗೆ ಎಂಬುದನ್ನು ವಿಚಾರಿಸಿದರು. ಬಳಿಕ ಬೈಕ್‌ನಿಂದ ಇಳಿಸಿ ಬಸ್ಕಿ ತೆಗೆಸಿದರು. ಏಪ್ರಿಲ್‌14ರವರೆಗೆ ಸುಮ್ಮನೆ ಹೊರಗೆ ಬರುವುದಿಲ್ಲ. ಕೊರೊನಾ ಓಡಿಸಲು ಬದ್ಧ ಎಂದು ಪ್ರತಿಜ್ಞೆ ಮಾಡಿಸಿ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT