ADVERTISEMENT

‘ದೇಶದಲ್ಲಿ ಕಾಡುತ್ತಿವೆ ಕೊರೋನಾ, ಎನ್ಆರ್‌ಸಿ, ಸಿಎಎ ವೈರಸ್’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 15:07 IST
Last Updated 13 ಮಾರ್ಚ್ 2020, 15:07 IST

ದಾವಣಗೆರೆ:ದೇಶದಲ್ಲಿ ಎರಡು ರೀತಿಯ ವೈರಸ್‌ಗಳು ಕಾಡುತ್ತಿವೆ. ಒಂದು ಕೊರೋನಾ ಇನ್ನೊಂದು ಎನ್ಆರ್‌ಸಿ, ಸಿಎಎ ವೈರಸ್ ಎಂದು ವಿಧಾನ ಪರಿಷತ್‌ ಸದಸ್ಯಸಿ.ಎಂ. ಇಬ್ರಾಹಿಂವ್ಯಂಗ್ಯವಾಡಿದರು.

ಇಲ್ಲಿ ನಡೆದ ಭಾರತ್‌ ಬಚಾವೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಎರಡು ವೈರೆಸ್ ನಿಂದ ಖಜಾನೆ ಖಾಲಿಯಾಗಿ ಷೇರು ಪೇಟೆ ಮುಳುಗಿ ಹೋಗಿವೆ.ಗೃಹ ಸಚಿವ ಅಮಿತ್ ಶಾ ನಿನ್ನೆ ರಾಜ್ಯಸಭೆಯಲ್ಲಿ ಪೌರತ್ವದ ಬಗ್ಗೆ ಒಂದು ಹೆಜ್ಜೆ ಕೆಳಗೆ ಇಳಿದಿದ್ದಾರೆ.ಪೌರತ್ವಕ್ಕೆ ಈಗ ಪತ್ರ ತೋರಿಸಬೇಕಿಲ್ಲ, ಎಲ್ಲೂ ಅಡ್ಡಿ ಮಾಡೋಲ್ಲ ಎಂದಿದ್ದಾರೆ.ಇಷ್ಟು ‌ದಿನ ಬೇಕಿತ್ತಾ ಇದನ್ನು ಮಾಡೋಕೆ’ ಎಂದು ಪ್ರಶ್ನಿಸಿದರು.

‘ದೇಶದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ ನಂತರ ಕಾನೂನು ಜಾರಿಮಾಡಬೇಕು.ಎನ್ಆರ್‌ಸಿ ಕಾನೂನು ಜಾರಿ ಮಾಡುತ್ತೇವೆ ಎಂದು ಹೇಳಿದವರು ಈಗ ಕೆಳಗೆ ಇಳಿಯುವ ಮಾತನಾಡುತ್ತಿದ್ದಾರೆ. ರಾಜ್ಯ ಸಭೆಯಲ್ಲಿ ಹೇಳಿದರೆ ಸಾಲದು ಅದನ್ನು ಲಿಖಿತ ರೂಪದಲ್ಲಿ ಹೊರಡಿಸಬೇಕು.ಇದರ ಬಗ್ಗೆ ಮೋದಿಯವರು ಒಳ್ಳೆ‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು.

ADVERTISEMENT

ಕೋವಿಡ್‌ 19 ನಿಯಂತ್ರಣಕ್ಕೆ ಜಿಲ್ಲೆಗಳಲ್ಲಿ ಆಧುನಿಕ ತಪಾಸಣೆ ಇರಬೇಕು.ಕಟ್ಟುನಿಟ್ಟಿನ ಕ್ರಮಕ್ಕೆ ಶ್ವೇತ ಪತ್ರ ಹೊರಡಿಸಬೇಕು.ಇದನ್ನು ರಾಜ್ಯ ಸರ್ಕಾರ ಮೊದಲೇ ಮಾಡಬೇಕಿತ್ತು ಎಂದರು.

ಮಧ್ಯಪ್ರದೇಶದಿಂದ 20 ಜನ ದೇವದಾಸಿಯರನ್ನು ಕರೆ ತಂದಿದ್ದಾರೆ.. ಸರ್ಕಾರ ಅವರನ್ನು ನೋಡಿಕೊಳ್ಳುವುದರಲ್ಲಿ ಬಿಜಿ ಇದೆ. ಆದೇವದಾಸಿಯರಿಗೆ ಮೊದಲು ಕೊರೋನಾ ಟೆಸ್ಟ್ ಮಾಡಿಸಲಿ ಎಂದುಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟಿದ್ದಕ್ಕೆ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.