ADVERTISEMENT

ಕೋವಿಡ್: ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ 1,111 ಮಂದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:30 IST
Last Updated 2 ಅಕ್ಟೋಬರ್ 2020, 16:30 IST

ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 1,111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದು ದಾಖಲೆಯಾಗಿದೆ.225 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಕುಂಬಳೂರು ಗ್ರಾಮದ 77 ವರ್ಷದ ವೃದ್ಧ ಗುರುವಾರ ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾ ಜೊತೆಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತು. ದಾವಣಗೆರೆ ಪಟ್ಟಣ ಹಾಗೂ ತಾಲ್ಲೂಕು ಸೇರಿ 92, ಹರಿಹರ ತಾಲ್ಲೂಕಿನ 54, ಜಗಳೂರು ತಾಲ್ಲೂಕಿನ 11, ಚನ್ನಗಿರಿ ತಾಲ್ಲೂಕಿನ 29, ಹೊನ್ನಾಳಿ ತಾಲ್ಲೂಕಿನ 36 ಹಾಗೂ ಹೊರ ಜಿಲ್ಲೆಗಳ ಮೂವರು ಮಂದಿ ಸೇರಿ 225 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಬಿಡುಗಡೆ:

ADVERTISEMENT

ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲಿ 643 ಮಂದಿ ಬಿಡುಗಡೆಯಾಗಿದ್ದು, ಹರಿಹರ ತಾಲ್ಲೂಕಿನ 168, ಜಗಳೂರು ತಾಲ್ಲೂಕಿನ 69, ಚನ್ನಗಿರಿ ತಾಲ್ಲೂಕಿನ 115, ಹೊನ್ನಾಳಿ ತಾಲ್ಲೂಕಿನ 104 ಹಾಗೂ ಹೊರ ಜಿಲ್ಲೆಗಳ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯ‌ಲ್ಲಿ 16466 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 242 ಮಂದಿ ಮೃತಪಟ್ಟಿದ್ದಾರೆ. 14,564 ಮಂದಿ ಗುಣಮುಖರಾಗಿದ್ದಾರೆ. 1660 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.