ಸಾಸ್ವೆಹಳ್ಳಿ: ಸಮೀಪದ ರಾಂಪುರದ ಕೆರೆಯಲ್ಲಿ ಮುಳುಗಿ ದಶರಥಪ್ಪ ಎಂಬುವವರ 2 ಹಸುಗಳು ಮೃತಪಟ್ಟಿವೆ.
ಐದು ಹಸುಗಳನ್ನು ಒಂದಕ್ಕೊಂದು ಹಗ್ಗ ಕಟ್ಟಿ ಗ್ರಾಮದ ಹೊರವಲಯದ ಕೆರೆಯಲ್ಲಿ ನೀರು ಕುಡಿಸುವಾಗ ಎರಡು ಹಸುಗಳು ಮುಳುಗಿವೆ.
ಗ್ರಾಮಸ್ಥರ ಆರೋಪ: ಗ್ರಾಮಾಡಳಿತ ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಯುವ ಕಾಮಗಾರಿಗೆ ಜೆಸಿಬಿಗಳನ್ನು ಬಳಸಿಕೊಂಡಿತ್ತು. ಹೀಗಾಗಿ, ಕೆರೆಯ ಅಂಗಳದಲ್ಲಿ ಎಲ್ಲೆಂದರಲ್ಲಿ ಆಳವಾಗಿ ಗುಂಡಿಗಳು ನಿರ್ಮಾಣವಾಗಿವೆ. ಈಗ ನೀರು ತುಂಬಿರುವ ಕೆರೆಯಲ್ಲಿ ಎಲ್ಲಿ ಗುಂಡಿಗಳಿವೆ ಎಂದು ತಿಳಿಯದಾಗಿದೆ. ಹೀಗಾಗಿ, ಅನಾಹುತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಲೇ ಹಸುಗಳು ಮೃತಪಟ್ಟಿವೆ. ಹೀಗಾಗಿ, ಹಸುಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಹಾಗೆಯೇ ಇಂಥ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.