ದಾವಣಗೆರೆ: ನಗರದ ಬಸವರಾಜಪೇಟೆಯ ಹುಬ್ಲಿ ಚೌಡಪ್ಪ ರಸ್ತೆಯಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಾಗಿ ಹಲವು ವಸ್ತುಗಳು ಭಸ್ಮವಾಗಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಜೋಡಿಸಿದ್ದ ಹಣವೂ ಬೆಂಕಿಗೆ ಆಹುತಿಯಾಗಿದೆ.
ಆಟೊ ಚಾಲಕ ಸಿಕಂದರ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಪಕ್ಕದ ಜಲೀನ್ ಅವರ ಮನೆಗಳು ಹೊತ್ತಿ ಉರಿದಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಕೂಡಿಸಿದ್ದ ₹ 100ರ ನೋಟುಗಳ ಕಂತೆ ಭಸ್ಮವಾಗಿದೆ. ಹಣ ಎಷ್ಟೇಂದು ತಿಳಿದು ಬಂದಿಲ್ಲ. ಇನ್ನು ಪಾತ್ರೆ ಪಗಡೆ, ಬಟ್ಟೆ, ಚಿನ್ನ ಬೆಳ್ಳಿ ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.