ADVERTISEMENT

ತಂತ್ರಜ್ಞಾನ ಅನ್ವೇಷಣೆಗೆ ಒತ್ತು ನೀಡಿ: ರೋಬೋಟಿಕ್‌ ಸಂಸ್ಥೆಯ ಸಿಇಒ ಬ್ರಿಜೇಶ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 7:41 IST
Last Updated 26 ಸೆಪ್ಟೆಂಬರ್ 2025, 7:41 IST
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಜಸ್ಟ್‌ ರೋಬೋಟಿಕ್‌ ಸಂಸ್ಥೆಯ ಸಿಇಒ ಬ್ರಿಜೇಶ್‌ ಮಾತನಾಡಿದರು
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಜಸ್ಟ್‌ ರೋಬೋಟಿಕ್‌ ಸಂಸ್ಥೆಯ ಸಿಇಒ ಬ್ರಿಜೇಶ್‌ ಮಾತನಾಡಿದರು   

ತೀರ್ಥಹಳ್ಳಿ: ‘ವಿಜ್ಞಾನ, ತಂತ್ರಜ್ಞಾನದ ಅನ್ವೇಷಣೆಗೆ ವಿದ್ಯಾರ್ಥಿಗಳು ಒತ್ತು ನೀಡಬೇಕು. ಆ ಮೂಲಕ ಕೃಷಿ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು’ ಎಂದು ಜಸ್ಟ್‌ ರೋಬೋಟಿಕ್‌ ಸಂಸ್ಥೆಯ ಸಿಇಒ ಬ್ರಿಜೇಶ್‌ ಹೇಳಿದರು. 

ತುಂಗಾ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ರೋಬೋಟಿಕ್‌ ತರಬೇತಿ ಕಾರ್ಯಾಗಾರದ ಸಮಾರೋಪ ಸಭೆಯಲ್ಲಿ ಮಾತನಾಡಿದರು. 

‘ಪ್ರಾಯೋಗಿಕ ಜ್ಞಾನ ತಾರ್ಕಿಕ ಚಿಂತನೆಗೆ ಸಹಕಾರಿಯಾಗಿದೆ. ಕೌಶಲ ಮತ್ತು ನವೀನ ತಂತ್ರಜ್ಞಾನದ ಆವಿಷ್ಕಾರ ಮನೋಭಾವ ಹೆಚ್ಚಿಸಿಕೊಳ್ಳಬೇಕು’ ಎಂದರು.  

ADVERTISEMENT

ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎನ್.ರಮೇಶ್‌ ಮಾತನಾಡಿದರು. 

ಕಾರ್ಯದರ್ಶಿ ಗಣಪತಿ ಬಿ., ಪ್ರಾಚಾರ್ಯ ಆರ್.ಕುಮಾರಸ್ವಾಮಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಮಣಿ, ಪ್ರಮುಖರಾದ ನಾಗರಾಜ್‌, ಮೋಹನಕುಮಾರ್‌ ಬಿ.ಸಿ., ವಿಭವ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.