ADVERTISEMENT

ದಾವಣಗೆರೆ | ಸೂರ್ಯಗ್ರಹಣ ವೀಕ್ಷಣೆಗೆ ಮೋಡ, ಮಳೆ, ಕೊರೊನಾ ಅಡ್ಡಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 6:28 IST
Last Updated 21 ಜೂನ್ 2020, 6:28 IST
ಮಂಗಳೂರಿನಲ್ಲಿ ಭಾನುವಾರ ಕಂಕಣ ಸೂರ್ಯಗ್ರಹಣ ಗೋಚರಿಸುತ್ತಿರುವ ದೃಶ್ಯ. -ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮಂಗಳೂರಿನಲ್ಲಿ ಭಾನುವಾರ ಕಂಕಣ ಸೂರ್ಯಗ್ರಹಣ ಗೋಚರಿಸುತ್ತಿರುವ ದೃಶ್ಯ. -ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ದಾವಣಗೆರೆ: ಕಂಕಣ ಸೂರ್ಯಗ್ರಹಣ ವೀಕ್ಷಿಸಲು ವಿವಿಧ ವಿಜ್ಞಾನ ಸಮಿತಿಗಳು ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಮಾಡಲು ಮುಂದಾಗಿದ್ದರೂ ಕೊರೊನಾ ವೈರಸ್ ಸೋಂಕು ಕಾರಣಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಆದರೂ ಕೃತಕ ಕನ್ನಡಕ ಮೂಲಕ ಗ್ರಹಣ ವೀಕ್ಷಣೆಗೆ ಹಲವು ಬಂದಿದ್ದರು. ಅವರಿಗೆ ಮೊದಲು ಮೋಡ, ಬಳಿಕ ಮಳೆ ಅವಕಾಶ ನೀಡಲಿಲ್ಲ.

ರಂಗಕರ್ಮಿ ಎಸ್.ಎಸ್.ಸಿದ್ದರಾಜು ತಂದಿದ್ದ ಉಪ್ಪಿಟ್ಟು ತಿಂದುಕೊಂಡು ಎಲ್ಲರೂ ಹೋದರು.

ಈ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಉಮೇಶ ಬಾಂಭೋರೆ, ಕರ್ನಾಟಕ ವಿಜ್ಞಾನ ಪರಿಷತ್ ಸದಸ್ಯ ಎಂ. ಗುರುಸಿದ್ಧಸ್ವಾಮಿ, ಡಾ.ಬಿ.ಇ. ರಂಗಸ್ವಾಮಿ, ಎಂ.ಟಿ. ಶರಣಪ್ಪ, ಕೆ.ಸಿ. ಬಸವರಾಜು, ಕೆ. ಸಿದ್ದೇಶ್, ಅಂಗಡಿ ಸಂಗಪ್ಪ, ಕಲಿವೀರ ಕಳ್ಳೀಮನಿ, ಆವರಗೆರೆ ರುದ್ರಮುನಿ ಅವರೂ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.