ADVERTISEMENT

ದಾವಣಗೆರೆ ಮಹಾನಗರಪಾಲಿಕೆ ಉಪಚುನಾವಣೆ: ಬಿಜೆಪಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಮೇ 2022, 4:20 IST
Last Updated 22 ಮೇ 2022, 4:20 IST
 ಜೆ.ಎನ್. ಶ್ರೀನಿವಾಸ್-ಶ್ವೇತಾ ಎಸ್. ದಂಪತಿ
ಜೆ.ಎನ್. ಶ್ರೀನಿವಾಸ್-ಶ್ವೇತಾ ಎಸ್. ದಂಪತಿ    

ದಾವಣಗೆರೆ: ಇಲ್ಲಿನ ಮಹಾನಗರಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳೂ ಬಿಜೆಪಿ ಪಾಲಾಗಿವೆ.

28ನೇ ವಾರ್ಡ್ ಸದಸ್ಯ ಜೆ.ಎನ್. ಶ್ರೀನಿವಾಸ್, 37ನೇ ವಾರ್ಡ್ ಸದಸ್ಯೆ ಶ್ವೇತಾ ಎಸ್. ದಂಪತಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ಉಪಚುನಾವಣೆ ನಡೆದಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ದಂಪತಿ ಜಯಗಳಿಸಿದ್ದಾರೆ.

ಜೆ.ಎನ್. ಶ್ರಿನಿವಾಸ್ 2565 ಮತ ಗಳಿಸಿದರೆ ಕಾಂಗ್ರೆಸ್‌ನ ಹುಲ್ಲುಮನಿ ಗಣೇಶ್ 1884 ಮತ ಪಡೆದರು. 681 ಮತಗಳಿಂದ ಶ್ರೀನಿವಾಸ್ ಜಯಗಳಿಸಿದರು.

ADVERTISEMENT

37ನೇ ವಾರ್ಡ್‌ನಲ್ಲಿ ಶ್ವೇತಾ 2096 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ 1303 ಮತ ಪಡೆದರು. ಶ್ವೇತಾ 793 ಮತಗಳಿಂದ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.