ADVERTISEMENT

ಸಾಮ್ರಾಜ್ಯ ಉಳಿಸಲು ಮಕ್ಕಳು ರಾಜಕೀಯಕ್ಕೆ

ಪುತ್ರ, ಪುತ್ರಿ ಓಡಾಡುತ್ತಿರುವುದನ್ನು ಸಮರ್ಥಿಸಿಕೊಂಡ ಸತೀಶ್‌ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:14 IST
Last Updated 8 ಫೆಬ್ರುವರಿ 2021, 17:14 IST
ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ   

ದಾವಣಗೆರೆ: ‘ಇಷ್ಟೆಲ್ಲ ಸಾಮ್ರಾಜ್ಯ ಕಟ್ಟಿದ್ದೇವೆ. ಅದನ್ನು ಮುಂದಕ್ಕೆ ಒಯ್ಯಲು ಮಕ್ಕಳು ಬೇಕೇಬೇಕಲ್ಲ. ಅವರು ರಾಜಕೀಯ ಬಂದೇ ಬರ್ತಾರೆ. ಈ ಬಗ್ಗೆ ಈಗಾಗಲೇ ನಾನು ಘೋಷಣೆ ಮಾಡಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಜಾರಕಿಹೊಳಿ ಅವರ ಪುತ್ರ ಮತ್ತು ಪುತ್ರಿ ಓಡಾಡಿಕೊಂಡಿರುವ ಬಗ್ಗೆ ಸುದ್ದಿಗಾರರು ಹರಿಹರದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಈಗಲೇ ಚುನಾವಣೆಗೆ ನಿಲ್ಲಲ್ಲ. ಅವರು ಇನ್ನಷ್ಟು ಕಲಿಯಲಿಕ್ಕಿದೆ. ಮುಂದೆ ಎಲ್ಲ ಕಲಿತುಕೊಂಡು ರಾಜಕೀಯಕ್ಕೆ ಬರುತ್ತಾರೆ ಎಂದು ಸಮರ್ಥಿಸಿಕೊಂಡರು.

ADVERTISEMENT

ಮಗಳು ಪ್ರಿಯಾಂಕ ಸೋಮವಾರ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.