ADVERTISEMENT

ಗಾಯಾಳು ನೆರವಿಗೆ ಬಂದ ಕಂಭಟ್ರಹಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 2:43 IST
Last Updated 27 ಫೆಬ್ರುವರಿ 2021, 2:43 IST

ಹರಪನಹಳ್ಳಿ: ತಾಲ್ಲೂಕಿನ ಉಪಕಾರಾಗೃಹ ಸಮೀಪ ಅಪಘಾತವಾಗಿದ್ದು, ನರಳುತ್ತಿದ್ದ ಗಾಯಾಳು ಯುವಕನನ್ನು ಕಂಭಟ್ರಹಳ್ಳಿಯ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ನಿವಾಸಿ ಶ್ರೀನಿವಾಸ್ ಬಳ್ಳಾರಿ ಗಾಯಗೊಂಡಿದ್ದ ಯುವಕ. ಶುಕ್ರವಾರ ಸಂಜೆ ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಶ್ರೀನಿವಾಸ ತಲೆಗೆ ಪೆಟ್ಟುಬಿದ್ದು ನರಳಾಡುತ್ತಿದ್ದ. ಅಂಬುಲೆನ್ಸ್‌ಗೆ ಕರೆ ಮಾಡಿ ವಿಷಯ ತಿಳಿಸಿದರೂ ವಾಹನ ಬರುವುದು ತಡವಾಯಿತು.

ಗಾಯಾಳುವನ್ನು ನೋಡಿದ ಗ್ರಾಮಸ್ಥರು ತಕ್ಷಣವೇ ಗೂಡ್ಸ್ ಆಟೊದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶ್ರೀನಿವಾಸ, ಮಲ್ಲನಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.