ADVERTISEMENT

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಪೊಲೀಸರಿಂದ ಮಂಗಳಾರತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:05 IST
Last Updated 1 ಏಪ್ರಿಲ್ 2020, 14:05 IST
ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿದ ಬೈಕ್ ಸವಾರನಿಗೆ ಮಂಗಳಾರತಿ ಮಾಡಿದ ಪೊಲೀಸರು
ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿದ ಬೈಕ್ ಸವಾರನಿಗೆ ಮಂಗಳಾರತಿ ಮಾಡಿದ ಪೊಲೀಸರು   

ದಾವಣಗೆರೆ: ಲಾಕ್‌ಡೌನ್ ಅದೇಶವನ್ನು ಉಲ್ಲಂಘಿಸಿ ಹೊರ ಬಂದ ವಾಹನ ಸವಾರರಿಗೆ ನಗರದ ಟ್ರಾಫಿಕ್ ಪೊಲೀಸರು ಮಂಗಳಾರತಿ ಮಾಡಿ ಮನೆಯಿಂದ ಹೊರ ಬಾರದಂತೆ ವಿನೂತನವಾಗಿ ಜಾಗೃತಿ ಮೂಡಿಸಿದರು.

ಲಾಠಿ ಚಾರ್ಜ್‌ ಮಾಡಿ, ಕೈಮುಗಿದು ‌ಕೇಳಿಕೊಂಡರೂ ತಲೆಕೆಡಿಸಿಕೊಳ್ಳದ ಸವಾರರಿಗೆ ಪೊಲೀಸರು ನಗರದ ಕೆಎಸ್ಆರ್‌ಟಿಸಿ ಮುಂಭಾಗ ವಾಹನಗಳನ್ನು ತಡೆದು ಆರತಿ ಬೆಳಗಿ ತಿಲಕವಿಟ್ಟು, ಕೈ ಮುಗಿದು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮಹಿಳಾ ಪೊಲೀಸರು ಮುಂದಾದರು.

‌ತರಕಾರಿಗಳು ಮನೆ ಬಳಿಗೆ ಬರುವಂತೆ ವ್ಯವಸ್ಥೆ ಮಾಡಿದರೂ ಮಾರುಕಟ್ಟೆಗೆ ಜನರು ಬರುತ್ತಿದ್ದಾರೆ. ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವರಿಗೂ ಆರತಿ ಬೆಳಗಿ ಮನೆಯಿಂದ ಹೊರ ಬರಬೇಡಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.

ADVERTISEMENT

ದಕ್ಷಿಣ ಸಂಚಾರ ಠಾಣೆಯ ಎಸ್‌ಐ ಮಂಜುನಾಥ್ ರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.