ADVERTISEMENT

ಪತ್ರಿಕಾ ವಿತರಕರ ಜತೆಗೆ ಪ್ರಜಾವಾಣಿ ಅಮೃತಮಹೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 6:41 IST
Last Updated 2 ನವೆಂಬರ್ 2022, 6:41 IST
ದಾವಣಗೆರೆಯ ನಗರದ ಪತ್ರಿಕಾ ವಿತರಣಾ ಕೇಂದ್ರದಲ್ಲಿ ಮಂಗಳವಾರ ನಸುಕಿನಲ್ಲಿ ‘ಪ್ರಜಾವಾಣಿ’ ಅಮೃತಮಹೋತ್ಸವವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯ ನಗರದ ಪತ್ರಿಕಾ ವಿತರಣಾ ಕೇಂದ್ರದಲ್ಲಿ ಮಂಗಳವಾರ ನಸುಕಿನಲ್ಲಿ ‘ಪ್ರಜಾವಾಣಿ’ ಅಮೃತಮಹೋತ್ಸವವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಪ್ರಜಾವಾಣಿ’ ಪತ್ರಿಕೆಗೆ 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮಂಗಳವಾರ ಪತ್ರಿಕಾ ಪ್ರತಿನಿಧಿಗಳ ಜತೆಗೆ ಅಮೃತ ಮಹೋತ್ಸವ ಆಚರಿಸಲಾಯಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಅವರು, ಅಮೃತ ಮಹೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಿ, ಕೇಕ್‌ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ್‌, ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್‌ ನಾಯಕ್‌, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಮೋದ್‌ ಭಾಗವತ್‌, ಮುದ್ರಣ ವಿಭಾಗದ ವ್ಯವಸ್ಥಾಪಕ ಟಿ. ಮುರಳೀಧರ, ಪ್ರಸರಣ ವಿಭಾಗದ ಪ್ರತಿನಿಧಿಗಳಾದ ಭರತ್‌ ಬಿಡ್ಡಪ್ಪ, ಸತೀಶ್‌, ಅಕೌಂಟೆಂಟ್‌ ವಿಭಾಗದ ಪಾಂಡುರಂಗ ಶೆಟ್ಟಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ್‌, ಅರುಣ್‌ ಕುಮಾರ್‌, ರಮೇಶ್‌ ಜೆ. ವತನ್‌, ನಿಂಗಪ್ಪ, ಆನಂದ, ಪ್ರದೀಪ್‌, ಪ್ರಕಾಶ್‌, ಬಸವರಾಜ ಮುಂತಾದವರು
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.