ADVERTISEMENT

ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ 24ರಿಂದ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 11:10 IST
Last Updated 21 ಡಿಸೆಂಬರ್ 2019, 11:10 IST
ದಾವಣಗೆರೆ ಶಿಲ್ಪಿ ಈಶ್ವರ ಪಿ. ಅವರು ರಚಿಸಿದ ಕಲಾಕೃತಿ
ದಾವಣಗೆರೆ ಶಿಲ್ಪಿ ಈಶ್ವರ ಪಿ. ಅವರು ರಚಿಸಿದ ಕಲಾಕೃತಿ   

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಾವಣಗೆರೆಯ ಹವ್ಯಾಸಿ ಕಲಾವಿದ ಈಶ್ವರ ಪಿ. ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಡಿಸೆಂಬರ್‌ 24ರಿಂದ 26ರವರೆಗೆ ಗೋವಾದ ಬಂಬೋಲ್ಕರ್‌ ಆರ್ಟ್‌ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಡಿ. 24ರಂದು ಮಧ್ಯಾಹ್ನ 12ಕ್ಕೆ ಗೋವಾದ ಲೇಖಕ ಪುಂಡಲೀಕ ನಾಯಕ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ಇತಿಹಾಸ ಉಪನ್ಯಾಸಕ ದತ್ತಾತ್ರೇಯ ಎನ್‌. ಭಟ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶಿಲ್ಪಕಲೆಯಲ್ಲಿ ಪದವಿ ಪಡೆದ ಈಶ್ವರ ಅವರು ಬೆಂಗಳೂರಿನಲ್ಲಿ ಶಿಲ್ಪಕಲಾ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಶಿಲೆ ಹಾಗೂ ಫೈಬರ್‌ ಮಾಧ್ಯಮದ 13 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ದಿನಾಲೂ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.