ADVERTISEMENT

ವಿದ್ಯಾರ್ಥಿನಿ ಸಾವಿಗೆ ಬೆಡ್‌ ಸಿಗದಿರುವುದೇ ಕಾರಣ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2021, 12:10 IST
Last Updated 4 ಮೇ 2021, 12:10 IST
ಸಂಗೀತ
ಸಂಗೀತ   

ದಾವಣಗೆರೆ: ಭಾರತ್‌ ಕಾಲೊನಿಯ 17 ವರ್ಷದ ಬಾಲಕಿ ಮಂಗಳವಾರ ಮೃತಪಟ್ಟಿದ್ದಾಳೆ. ಎಲ್ಲ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದರೂ ಬೆಡ್‌ ಸಿಗದೇ, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಈ ಸಾವು ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನಗರದ ಭಾರತ್‌ ಕಾಲೊನಿಯ 12ನೇ ಕ್ರಾಸ್‌ ನಿವಾಸಿ ಮಂಜಪ್ಪ–ವೇಡಿಯಮ್ಮ ದಂಪತಿಯ ಮಗಳು ಸಂಗೀತ ಮೃತಪಟ್ಟವಳು. ಸಂಗೀತಾಳಿಗೆ ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಕ್ಲಿನಿಕ್‌ನಲ್ಲಿ ಗ್ಲುಕೋಸ್‌ ಕೊಡಿಸಿ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಎಲ್ಲಿಯೂ ಬೆಡ್‌ ಸಿಕ್ಕಿಲ್ಲ. ಇದರಿಂದ ಸಂಗೀತ ಮೃತಪಟ್ಟಿದ್ದಾಳೆ ಎಂದು ಸ್ಥಳೀಯ ಮುಖಂಡ ಜಗದೀಶ್‌ ತಿಳಿಸಿದ್ದಾರೆ.

ಎದೆನೋವು, ಉಸಿರಾಟದ ಸಮಸ್ಯೆ ಎಂದ ಕೂಡಲೇ ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಯಾವ ಆಸ್ಪತ್ರೆಯಲ್ಲೂ ಸ್ಪಂದಿಸಿಲ್ಲ. ಬೆಡ್‌ ಸಿಕ್ಕಿದ್ದರೆ ಬದುಕಿ ಉಳಿಯುತ್ತಿದ್ದಳು ಎಂದು ಆಕೆಯ ಮಾವ ಕೆ. ರಾಜ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.