ಹರಿಹರ: ನಗರದಲ್ಲಿ ಈಚೆಗೆ ನಡೆದ ಸರಣಿ ಮನೆ ಕಳ್ಳತನದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ವಿನೋಬ ನಗರದ ದಾದಾಪೀರ್ ಸಂಷುದ್ದಿನ್ ಬಂಧಿತ ಆರೋಪಿ. ಆರೋಪಿಯಿಂದ ₹ 4.52 ಲಕ್ಷ ಮೌಲ್ಯದ ಬಂಗಾರದ ಆಭರಣ, ₹ 48,000 ಮೌಲ್ಯದ 897 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಪಿಐ ಸತೀಶ್ಕುಮಾರ್ ನೇತೃತ್ವದಲ್ಲಿ ಪಿಎಸ್ಐಗಳಾದ ಶಂಕರಗೌಡ ಪಾಟೀಲ್, ಅಬ್ದುಲ್ ಖಾದರ್ ಜಿಲಾನಿ, ಚಿದಾನಂದಪ್ಪ, ಮಹದೇವ ಸಿದ್ದಪ್ಪ ಬತ್ತೆ, ಮಂಜುನಾಥ ಕಲ್ಲೇದೇವರ ಮತ್ತು ಸಿಬ್ಬಂದಿ ಮಂಜುನಾಥ್, ನಾಗರಾಜ್, ದೇವರಾಜ್ ಸುರ್ವೆ, ಮಂಜುನಾಥ್ ಕ್ಯಾತಮ್ಮನವರ್, ಹನುಮಂತಪ್ಪ, ದ್ವಾರಕೇಶ್ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.