ADVERTISEMENT

ಫೆಬ್ರುವರಿಯಲ್ಲಿ ದೆಹಲಿಗೆ ಪಯಣ: 11 ಮಂದಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 11:57 IST
Last Updated 2 ಏಪ್ರಿಲ್ 2020, 11:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ದಾವಣಗೆರೆ: ದೆಹಲಿಗೆ ಫೆಬ್ರುವರಿಯಲ್ಲಿ ಹೋಗಿ ಬಂದಿದ್ದ 11 ಮಂದಿಯನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ದಾಖಲಿಸಲಾಗಿದೆ.

ಚನ್ನಗಿರಿ ನಗರದ 8 ಮಂದಿ, ಹೊನ್ನಬಾಗಿ ಗ್ರಾಮ, ಅಗರಬನ್ನಿಹಟ್ಟಿ ಗ್ರಾಮ ಹಾಗೂ ಕೆರೆಬಿಳಚಿ ಗ್ರಾಮದ ತಲಾ ಒಬ್ಬರು ದೆಹಲಿಗೆ ಹೋಗಿ ಫೆಬ್ರುವರಿ 28ರಂದು ವಾಪಸ್ಸಾಗಿದ್ದರು.

ದೆಹಲಿಗೆ ಕಳೆದ ಎರಡು ತಿಂಗಳುಗಳಲ್ಲಿ ಯಾರೆಲ್ಲ ಬಂದು ಹೋಗಿದ್ದಾರೋ ಅವರ ಮೊಬೈಲ್‌ ಸಂಖ್ಯೆ, ವಿಳಾಸವನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಅದರಂತೆ ಈ 11 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದ ಧರ್ಮಸಭೆಯಲ್ಲಿ ಇವರು ಭಾಗವಹಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.