ADVERTISEMENT

ಹಾಲಿನ ಲಾರಿ–ಕಾರು ಡಿಕ್ಕಿ: ಇಬ್ಬರು ಯುವಕರ ಸಾವು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 8:53 IST
Last Updated 6 ಡಿಸೆಂಬರ್ 2020, 8:53 IST
ನ್ಯಾಮತಿ ಹೊರವಲಯದ ಕುಮಟಾ-–ಕಾರಮಡಗಿ ಹೆದ್ದಾರಿಯ ಸಾಲಬಾಳು ಗ್ರಾಮದ ಬಳಿ ಶನಿವಾರ ಸಂಜೆ ಹಾಲಿನ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಆಮ್ನಿ ಕಾರು ನಜ್ಜುಗುಜ್ಜಾಗಿರುವುದು.
ನ್ಯಾಮತಿ ಹೊರವಲಯದ ಕುಮಟಾ-–ಕಾರಮಡಗಿ ಹೆದ್ದಾರಿಯ ಸಾಲಬಾಳು ಗ್ರಾಮದ ಬಳಿ ಶನಿವಾರ ಸಂಜೆ ಹಾಲಿನ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಆಮ್ನಿ ಕಾರು ನಜ್ಜುಗುಜ್ಜಾಗಿರುವುದು.   

ನ್ಯಾಮತಿ: ಪಟ್ಟಣದ ಹೊರವಲಯದ ಕುಮಟಾ-ಕಾರಮಡಗಿ ಹೆದ್ದಾರಿಯ ಸಾಲಬಾಳು ಗ್ರಾಮದ ಬಳಿ ಶನಿವಾರ ಸಂಜೆ ಹಾಲಿನ ಲಾರಿ ಮತ್ತು ಆಮ್ನಿ ಕಾರು ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಶಿಕಾರಿಪುರ ತಾಲ್ಲೂಕು ಹೊಸೂರು ಗ್ರಾಮದ ಸಂತೋಷ (32) ಹಾಗೂ ಚಾಲನೆ ಮಾಡುತ್ತಿದ್ದ ಶ್ರೀನಿವಾಸ (33) ಮೃತಪಟ್ಟಿದ್ದಾರೆ.

ಶಿಕಾರಿಪುರ ತಾಲ್ಲೂಕು ಹೊಸೂರಿನಿಂದ ಸವಳಂಗ ಕಡೆ ಹೋಗುತ್ತಿದ್ದ ಕಾರು, ಎದುರುಗಡೆಯಿಂದ ನ್ಯಾಮತಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಸಂತೋಷ ಸ್ಥಳದಲ್ಲೇ
ಮೃತಪಟ್ಟರು. ಶ್ರೀನಿವಾಸ ಅವರ ಕೈಕಾಲು, ತಲೆಗೆ ಪೆಟ್ಟು ಬಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಮೃತಪಟ್ಟಿದ್ದಾರೆ. ನ್ಯಾಮತಿ ಎಸ್‌ಐ ಪಿ.ಎಸ್. ರಮೇಶ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT