ಧಾರವಾಡ: ಕಾಂಗ್ರೆಸ್ ಪಕ್ಷ ಸೇರಿದ ನಂತರ ತಾಲ್ಲೂಕಿನ ಗೋವನಕೊಪ್ಪಕ್ಕೆ ಬಂದ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ ಗೌಡರ ಅವರನ್ನು ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸದಸ್ಯರು ಬುಧವಾರ ತಡರಾತ್ರಿ ಆತ್ಮೀಯವಾಗಿ ಬರಮಾಡಿಕೊಂಡರು.
ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತವ್ವ ಗುಜ್ಜಳ ನೇತೃತ್ವದ ಕಾರ್ಯಕರ್ತೆಯರು ಮಲ್ಲಮ್ಮನಿಗೆ ಪಕ್ಷದ ಸಂಪ್ರದಾಯದಂತೆ ಶಾಲು ಹೊದಿಸಿ ಸನ್ಮಾನಿಸಿದರು. ಕಾಂಗ್ರೆಸ್ ಪಕ್ಷ, ಸಚಿವ ವಿನಯ ಕುಲಕರ್ಣಿ ಹಾಗೂ ಮಲ್ಲಮ್ಮಗೌಡರ ಅವರಿಗೆ ಜಯಕಾರ ಹಾಕಿದರು. ನಂತರ ಸಿಹಿ ತಿನಿಸಿ ಸಂಭ್ರಮಿಸಿದರು.
ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಕಳ್ಳಿಮನಿ, ಪಧಾಧಿಕಾರಿಗಳಾದ ನಿರ್ಮಲಬಾಯಿ ಹೊಂಗಲ, ಕವಿತಾ ಕಟ್ಟಿ, ಉಮಾದೇವಿ ಬಿದರಿಮಠ, ಪೂಜಾ ಹಳ್ಯಾಳ, ಗೌರಿ ನಾಡಗೌಡ, ಶೋಭಾ ಅಣ್ಣಿಗೇರಿ, ಸುಮಾ ಬಿನಗಲರ, ಸುನಿತಾ ವೀರಕರ, ಕಲಾವತಿ ಗಿರಿಯಣ್ಣವರ ಹಾಗೂ ಆನಂದ ಸಿಂಗನಾಥ, ಆಶೀಫ್ ಸೇಖಸನದಿ, ಮಂಜು ಕಾಮಕರ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.