ADVERTISEMENT

‘ಸಂಸ್ಕೃತಿ, ಸದಾಚಾರ ಅಳಿದರೆ ಅಪಾಯ ನಿಶ್ಚಿತ’

​ಪ್ರಜಾವಾಣಿ ವಾರ್ತೆ
Published 21 ಮೇ 2014, 9:34 IST
Last Updated 21 ಮೇ 2014, 9:34 IST
ಹುಬ್ಬಳ್ಳಿಯ ನವನಗರ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಗುರುಸಿದ್ದಯ್ಯ ಸ್ವಾಮಿ ಹಿರೇಮಠ ಅವರ ಷಷ್ಠ್ಯಬ್ಧಿಪೂರ್ತಿ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿ.ಎಸ್. ಕೆಂಚನಗೌಡರ, ಎಸ್.ಎಸ್.ಪಾಟೀಲ, ರಂಭಾಪುರಿ ಶ್ರೀಗಳು, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಮಲ ರೇಣುಕ ಶಿವಾಚಾರ್ಯ ಸ್ವಾಮೀಜಿ, ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ
ಹುಬ್ಬಳ್ಳಿಯ ನವನಗರ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಗುರುಸಿದ್ದಯ್ಯ ಸ್ವಾಮಿ ಹಿರೇಮಠ ಅವರ ಷಷ್ಠ್ಯಬ್ಧಿಪೂರ್ತಿ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿ.ಎಸ್. ಕೆಂಚನಗೌಡರ, ಎಸ್.ಎಸ್.ಪಾಟೀಲ, ರಂಭಾಪುರಿ ಶ್ರೀಗಳು, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಮಲ ರೇಣುಕ ಶಿವಾಚಾರ್ಯ ಸ್ವಾಮೀಜಿ, ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ   

ಹುಬ್ಬಳ್ಳಿ: ‘ಎಲ್ಲ ರಂಗಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆ­ಯಾಗುತ್ತಿವೆ. ಆದರ್ಶ ಸಂಪ್ರದಾಯ, ಸಂಸ್ಕೃತಿ ಮತ್ತು ಸದಾಚಾರವೂ ಇಲ್ಲದಾ­ಗುತ್ತಿದ್ದು ಈ ಸ್ಥಿತಿ ಹೀಗೆಯೇ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಗಳು ಹೇಳಿದರು.

ನವನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ  ವೇದಮೂರ್ತಿ ಗುರುಸಿದ್ಧಯ್ಯಸ್ವಾಮಿ ಹಿರೇಮಠ ಅವರ ಷಷ್ಠ್ಯಬ್ಧಿಪೂರ್ತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪ್ರಯತ್ನ ಮತ್ತು ಸಾಧನೆಯ ಉನ್ನ­ತಿಗೆ ಕಾರಣವಾಗುತ್ತದೆ. ಕ್ರಿಯಾ­ಶೀಲ ಬದುಕು ವ್ಯಕ್ತಿಗೆ ಗೌರವ ತಂದುಕೊಡು­ತ್ತದೆ’ ಎಂದು ಶ್ರೀಗಳು ಹೇಳಿದರು.

ಗುರುಸಿದ್ಧಯ್ಯ ಕುರಿತ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ‘ಗುರು­ಸೇವಾ ದರ್ಪಣ’ವನ್ನು ಸಮಾರಂಭದಲ್ಲಿ ಹುಬ್ಬಳ್ಳಿಯ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ವಿ.ಎಸ್.ಕೆಂಚನಗೌಡರ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್. ಪಾಟೀಲ ಅದರಗುಂಚಿ, ಕವಿ ಗದಗಯ್ಯ ಹಿರೇಮಠ ಹಾಗೂ ವಿಶ್ವಪ್ರಕಾಶ ಹಿರೇಮಠ ಅಭಿನಂದನಾ ಭಾಷಣ ಮಾಡಿದರು.

ಅಖಿಲ ಭಾರತ ವೀರಶೈವ ಶಿವಾ­ಚಾರ್ಯ ಸಂಸ್ಥೆಯ ಅಧ್ಯಕ್ಷ ಹಾಗೂ ಕಲಾದಗಿ ಪಂಚಗೃಹ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ವಿಮಲ ರೇಣುಕ ಶಿವಾಚಾರ್ಯ ಸ್ವಾಮೀಜಿ, ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾ­ಚಾರ್ಯ ಸ್ವಾಮೀಜಿ, ಸುಳ್ಳ ಪಂಚಗೃಹ ಹಿರೇಮಠದ ಶಿವ ಸಿದ್ಧ­ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ  ಮಾತನಾಡಿದರು.

ಹುಡಾ ಮಾಜಿ ಅಧ್ಯಕ್ಷ ಕಾಡಯ್ಯ ಹಿರೇಮಠ, ವಕೀಲ ಜಿ.ಆರ್. ಅಂದಾನಿ­ಮಠ,  ರಾಜ್ಯ ಜಂಗಮ ಕ್ಷೇಮಾ­ಭಿ­ವೃದ್ಧಿ ಸಂಘದ ಯುವ ಘಟಕದ ಅಧ್ಯಕ್ಷ ಬಂಗಾರೇಶ ಹಿರೇಮಠ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್. ಪಾಟೀಲ ಅದರ­ಗುಂಚಿ,  ಶ್ರೀಮದ್ವೀರ­ಶೈವ ಸದ್ಬೋಧನಾ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಎಫ್.ಡಿ. ಪಾಟೀಲ, ಯಶವಂತ ಹಿಬಾರೆ, ಡಾ.ಎಂ.ಜಿ. ಹಿರೇ­ಮಠ, ಹುಡಾ ವ್ಯವಸ್ಥಾಪಕ ಪರಮೇಶ್ವ­ರಪ್ಪ ವಿಭೂತಿ, ಇಂದುಮತಿ ಮಾನ್ವಿ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ  ಮತ್ತಿತರರಿದ್ದರು. ವೀರೇಶ ಹಿರೇಮಠ ಸ್ವಾಗತಿಸಿ­ದರು. ದಾಕ್ಷಾಯಿಣಿ  ನಿರೂಪಿಸಿದರು. ಜಗದೀಶ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.