ADVERTISEMENT

ಧಾರವಾಡ | ₹23 ಕೋಟಿ ವಂಚನೆ ಪ್ರಕರಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 23:22 IST
Last Updated 22 ನವೆಂಬರ್ 2025, 23:22 IST
ಸತೀಶ್ ವುಪ್ಪಲಪಾಟಿ, ಶಿಲ್ಪಾ ಬಂಡಾ
ಸತೀಶ್ ವುಪ್ಪಲಪಾಟಿ, ಶಿಲ್ಪಾ ಬಂಡಾ   

ಧಾರವಾಡ: ಹೂಡಿಕೆದಾರರಿಗೆ ₹ 23 ಕೋಟಿ ವಂಚಿಸಿದ ಪ್ರಕರಣದ ಆರೋಪಿಗಳಾದ ಸತೀಶ್ ವುಪ್ಪಲಪಾಟಿ ಮತ್ತು ಅವರ ಪತ್ನಿ ಶಿಲ್ಪಾ ಬಂಡಾ ದಂಪತಿಯನ್ನು ಹುಬ್ಬಳ್ಳಿ –ಧಾರವಾಡ ಬೈಪಾಸ್‌ ಮಾರ್ಗದಲ್ಲಿ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಗಳಿಬ್ಬರೂ ಹೈದರಾಬಾದ್‌ ಪೊಲೀಸರಿಂದ ತಲೆಮರೆಸಿಕೊಂಡಿದ್ದರು. ಸುಳಿವು ಆಧರಿಸಿ ಬಂಧಿಸಲಾಯಿತು. ಇಬ್ಬರನ್ನೂ ಹೈದರಾಬಾದ್‌ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರ ವಿರುದ್ಧ ಅಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಎಸ್‌ಪಿ ಗುಂಜನ್‌ ಆರ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT